
ಹಳಿಯಾಳ:- ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಗೋವಾ ನೊಂದಣಿಯ ಮರಳು ಲಾರಿಯನ್ನು ತಾಲೂಕಿನ ಕರ್ಕಾ ಚೆಕ್ಪೊಸ್ಟ್ ಬಳಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಳಿಯಾಳ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ, ಸಾಗಾಣಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಕಮಿಷನರ್ ಅವರು ಅಕ್ರಮ ಮರಳುಗಾರಿಕೆ ತಡೆಯಲು ಸಂಚಾರಿ ದಳವನ್ನು ಮಾಡಿ ಗಸ್ತು ತಿರುಗುವಂತೆ ಆದೇಶಿಸಿದ್ದದ್ದರು. ಈ ಹಿನ್ನೆಲೆ ಮಧ್ಯರಾತ್ರಿ 1.30ರ ಸುಮಾರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಗೋವಾ ನೊಂದಣಿಯ ಲಾರಿಯನ್ನು ವಶಕ್ಕೆ ಪಡೆಯುವಲ್ಲಿ ಗಸ್ತು ತಂಡ ಸಫಲವಾಗಿದೆ.
ಕಂದಾಯ ಇಲಾಖೆಯ ಆರ್ಐ ಅನಿಲ ಪರ್ವತ, ಗ್ರಾಪಂ ಕಾರ್ಯದರ್ಶಿ ಗಿರಿಶ ಬಿರಾದಾರ, ಎಎಸ್ಐ ಮಹಾಬಲೇಶ್ವರ ಗಡೆರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.
Leave a Comment