ಹಳಿಯಾಳ:- ಕೊರೊನಾ ಹೆಮ್ಮಾರಿಯ ಕಾಟದಿಂದ ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ, ವಿವಿಧೆಡೆ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿ ಇನ್ನೂ ಸರಿಯಾಗಿಲ್ಲ ಅವರಿಗೆ ಸರ್ಕಾರ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದುಡಿಯುವ ಕಾರ್ಮಿಕರಿಗೆ ಅಗತ್ಯ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಈ ಹಿಂದೆಯೂ ಲಾಕ್ಡೌನ್ ಸಮಯದಲ್ಲಿ ಕಿಟ್ ನೀಡಲಾಗಿತ್ತು ಇಂದು ಮತ್ತೊಮ್ಮೆ ಕಿಟ್ ನೀಡುತ್ತಿದ್ದೇನೆ ಎಂದ ಅವರು ಉಳ್ಳವರು ಸಮಸ್ಯೆಯಲ್ಲಿದ್ದವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಳಿಯಾಳ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ಕೂಡ ಕಿಟ್ ವಿತರಿಸಿ ಮಾತನಾಡಿ ಈವರೆಗೆ ೧೫ಸಾವಿರಕ್ಕೂ ಅಧಿಕ ಕಿಟ್ ವಿತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಪಾಟೀಲ್, ಹಮಾಲರ ಸಂಘದ ಪದಾಧಿಕಾರಿಗಳಾದ ಮುಕುಂದ ಮರೆಪ್ಪಾ ಬೆಳಗಾಂವಕರ, ಸಂತೋಷ ಗೌಡಾ, ಅತಾವುಲ್ಲಾ ಶೆಂಡೆವಾಲೆ, ಸಂತೋಷ ಮರಾಟೆ, ಪರಶುರಾಮ ಬೆಳಗಾಂವಕರ, ಬಶಿರ ಸಾಂಗೆವಾಲೆ ಇತರರು ಇದ್ದರು.
Leave a Comment