
ಹಳಿಯಾಳ:- ಮಹಾರಾಷ್ಟ್ರ ರಾಜ್ಯ ಮುಂಬೈನ ದಾದರನಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರ ಮನೆ ಹಾಗೂ ಗ್ರಂಥಾಲಯಗಳನ್ನು ದ್ವಂಸ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಬಿಜೆಪಿ ತಾಲೂಕಾ ಘಟಕದ ಪರಿಶಿಷ್ಟ ಜಾತಿ(ಎಸ್.ಸಿ) ಮೋರ್ಚಾ ಆಗ್ರಹಿಸಿದೆ.
ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಭಾರತ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಜಿ.ಕೆ ರತ್ನಾಕರ ಅವರಿಗೆ ಸಲ್ಲಿಸಿದರು.
ಮನವಿ ಸಲ್ಲಿಸುವಾಗ ಬಿಜೆಪಿಯ ತಾಲೂಕಾ ಎಸ್ ಸಿ ಮೋರ್ಚಾದ ಅಧ್ಯಕ್ಷ ಹನುಮಂತ ಕಲ್ಲಪ್ಪ ಚಿನಗಿನಕೊಪ್ಪ, ಹಳಿಯಾಳ ಪುರಸಭೆಯ ಬಿಜೆಪಿ ಚುನಾಯಿತ ಸದಸ್ಯ ಸಂತೋಷ ಘಟಕಾಂಬ್ಳೆ, ಈರಣ್ಣ ಮುತ್ತಪ್ಪ ವಡ್ಡರ, ಕುಮಾರ ಕಲಭಾವಿ ಇತರರು ಇದ್ದರು.

Leave a Comment