ಹಳಿಯಾಳ:- ಕಳೆದ 5 ದಿನಗಳ ಹಿಂದೆ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಧಾರವಾಡದ ಎಸ್.ಡಿಎಮ್ ಆಸ್ಪತ್ರೆಗೆ ದಾಖಲಾಗಿದ್ದ ಹಳಿಯಾಳದ ಬಸವನಗರದ 74 ವರ್ಷದ ವೃದ್ದೆ ಶನಿವಾರ ಕೊರೊನಾದಿಂದ ಮೃತಪಟ್ಟಿದ್ದಾರೆ.
ಎಸ್.ಡಿಎಮ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಅಜ್ಜಿಯ ಕೊವಿಡ್-19 ಪರೀಕ್ಷೆ ನಡೆಸಲಾಗಿತ್ತು ಈ ಸಂದರ್ಭದಲ್ಲಿ ಅಜ್ಜಿಗೆ ಕೊರೊನಾ ಇರುವುದು ದೃಢಪಟ್ಟಿದ್ದರಿಂದ ಕೊವಿಡ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಹಳಿಯಾಳದ ಈ ಅಜ್ಜಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಸದ್ಯ ಅಜ್ಜಿಯ ಕುಟುಂಬದ ಮೂವರಿಗೆ ಶನಿವಾರ ಸೊಂಕು ದೃಢಪಟ್ಟಿದೆ. ಕುಟುಂಬದಲ್ಲಿ ಓರ್ವರಿಗೆ ಮಾತ್ರ ನೆಗೆಟಿವ್ ಬಂದಿದ್ದು ಅವರು ಮಾತ್ರ ಅಜ್ಜಿಯ ಅಂತ್ಯಕ್ರಿಯೇಗೆ ಧಾರವಾಡಕ್ಕೆ ತೆರಳಿದ್ದಾಗಿ ತಿಳಿದು ಬಂದಿದೆ. ಸದ್ಯ ಬಸವನಗರ ಸೀಲ್ಡೌನ್ ಮಾಡಲಾಗಿದೆ.
Leave a Comment