
ಧಾರವಾಡ :- ಜಿಲ್ಲೆಯಲ್ಲಿ ಮಂಗಳವಾರ 173 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3553 ಕ್ಕೆ ಏರಿದೆ. ಇದುವರೆಗೆ 1453 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1991 ಪ್ರಕರಣಗಳು ಸಕ್ರಿಯವಾಗಿವೆ. 34 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 109ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ_ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ_ಪ್ರಕರಣಗಳು_ಪತ್ತೆಯಾದ_ಸ್ಥಳಗಳು:
ಧಾರವಾಡ_ತಾಲೂಕು:- ಮೃತ್ಯುಂಜಯ ನಗರ, ಟೋಲ್ನಾಕಾದ ಬಸವಶ್ರೀ ಅಪಾರ್ಟ್ಮೆಂಟ್, ಶಿವಾನಂದ ನಗರ, ಗುಲಗಂಜಿ ಕೊಪ್ಪ ರಾಜನಗರ, ಸಾರಸ್ವತಪುರ, ಶಕ್ತಿ ಕಾಲೋನಿ, ಹೆಬ್ಬಳ್ಳಿ ಅಗಸಿ, ಸತ್ತೂರ ಆಶ್ರಯ ಕಾಲೋನಿ, ಶಿವಗಿರಿ, ಜಯನಗರ, ಸತ್ತೂರ ರಾಜಾಜಿನಗರ, ಮಾಳಾಪೂರ, ಬೆನಕನಕಟ್ಟಿ, ಮರೆವಾಡ ಗ್ರಾಮ, ಮಾಳಮಡ್ಡಿ, ನಾರಾಯಣಪೂರ ಓಣಿ ಕಮಲಾಪೂರ, ಗರಗ ಗ್ರಾಮದ ಬಸವೇಶ್ವರ ನಗರ,ಹಂಗರಕಿ, ಸಿ.ಬಿ.ನಗರ, ಕೊಪ್ಪದಕೇರಿ, ತೇಜಸ್ವಿನಗರ, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ ಯಲ್ಲಿ 16 ಪ್ರಕರಣಗಳು, ಸೋಮಾಪೂರ, ನಿಜಾಮುದ್ದೀನ ಕಾಲೋನಿ, ಮದಿಹಾಳ, ಮಂಗಳವಾರ ಪೇಟ, ಗೊಲ್ಲರ ಕಾಲೋನಿ, ಟಾಟಾ ಮಾರ್ಕೊಪೋಲೋ, ಹಾಶ್ಮಿ ನಗರ, ಮೆಹಬೂಬ್ ನಗರ, ಬೂಸಪ್ಪ ಚೌಕ್, ಎಸ್.ಡಿ.ಎಂ ಆಸ್ಪತ್ರೆ ಸತ್ತೂರ, ಮನಕಿಲ್ಲಾ, ನಂದಿಗಡ, ಕಾಮನಕಟ್ಟಿ ಪಂಚಕಚೇರಿ ಓಣಿ, ಸತ್ತೂರ ಉದಯಗಿರಿ.
ಹುಬ್ಬಳ್ಳಿ_ತಾಲೂಕು : – ಕರಿಯಮ್ಮನ ಗುಡಿ ಹತ್ತಿರ ವೀರಾಪೂರ ಓಣಿ, ಗೋಕುಲ ರಸ್ತೆ ಹತ್ತಿರ ರುದ್ರಗಂಗಾ ಲೇಔಟ್, ನೇಕಾರ ನಗರ, ಕರ್ನಾಟಕ ಸರ್ಕಲ್, ಸಿಟಿ ಪಾರ್ಕ್ ನವನಗರ, ಹಳೆ ಹುಬ್ಬಳ್ಳಿಯ ನೂರಾನಿ ಪ್ಲಾಟ, ರೇಲ್ವೆ ಸುರಕ್ಷಾ ದಳದ ಬ್ಯಾರಕ್, ಇಂದ್ರಾನಗರ, ಫಾರೆಸ್ಟ್ ಕಾಲೋನಿ, ಗೋಕುಲ ರಸ್ತೆಯ ಸಮನ್ ಕಾಲೋನಿ ಎಂ ಸಿ ಎಲ್ ಹತ್ತಿರ, ಜಯಪ್ರಕಾಶ ನಗರ, ಕೇಶ್ವಾಪೂರ, ಕುಸುಗಲ್ ರಸ್ತೆಯ ಆಕಾಶ ಪಾರ್ಕ, ವಿನಾಯಕ ಮಂದಿರ ವಿದ್ಯಾನಗರ, ಗಣೇಶಪೇಟ ಗೂಡಶೆಡ್ ರಸ್ತೆ, ವಿಶ್ವೇಶ್ವರ ನಗರ, ಗೋಪನಕೊಪ್ಪ, ಆದರ್ಶನಗರ, ಬ್ಯಾಹಟ್ಟಿ, ಕೇಶ್ವಾಪೂರದ ಹೇಮಂತನಗರ, ಅಯೋಧ್ಯನಗರ, ಗುರು ಸಿದ್ದೇಶ್ವರ ನಗರ, ಕ್ವಾಟರ್ಸ್, ಬಸವೇಶ್ವರ ಪಾರ್ಕ್, ವಾಳವೇಕರ ಗಲ್ಲಿ, ವೀರಾಪೂರ ರಸ್ತೆಯ ಪಗಡಿ ಓಣಿ, ಹಳೇ ಹುಬ್ಬಳ್ಳಿಯ ಆಯೋಧ್ಯನಗರ, ಕೆ.ಬಿ.ನಗರ, ಬಸವೇಶ್ವರ ನಗರ, ಹೊಸೂರ, ಸಿದ್ಧಾರೂಢ ನಗರ, ಮಧುರಾ ಕಾಲೋನಿ, ವಿಶಾಲ ನಗರ, ಲಿಂಗರಾಜನಗರ ಸತ್ತೂರ ಲೇಔಟ್, ಶಾಂತಿನಗರ, ಹಳೇ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆ, ಕಟಗರ ಓಣಿ ಸದರಸೋಫಾ, ಶಾಂತಿನಿಕೇತನ, ಘಂಟಿಕೇರಿ, ಭೈರಿದೇವರಕೊಪ್ಪ, ಉಣಕಲ್ ಶ್ರೇಯಾನಗರ, ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ, ರಾಜ್ನಗರ, ನ್ಯೂ ಗಬ್ಬೂರ, ಆನಂದ ನಗರ, ಇಂಗಳಹಳ್ಳಿ ಗ್ರಾಮದ ಮಠದ ಓಣಿ, ವಿಕಾಸ ನಗರದ ಸಿದ್ದಲಿಂಗೇಶ್ವರ ಕಾಲೋನಿ, ಬೆಂಡಿಗೇರಿ ಓಣಿ, ಚನ್ನಮ್ಮ ವೃತ್ತ, ಕಲ್ಲೂರ ಲೇಔಟ್, ಪ್ರಿಯದರ್ಶಿನಿ ಕಾಲೋನಿ, ಚನ್ನಪೇಟ್ ರಸ್ತೆ ವಿಠಲಪೇಟ, ಚೇತನಾ ಕಾಲೋನಿ, ಸಿದ್ದನಗರ, ಬೆಂಗೇರಿಯ ಕುರುಬರ ಓಣಿ, ಹಳೆ ಹುಬ್ಬಳ್ಳಿ ವಿಶಾಲನಗರ ಹತ್ತಿರ.
ಕುಂದಗೋಳ_ತಾಲೂಕು :- ತಾಲೂಕು ಆಸ್ಪತ್ರೆ, ಗುಡಗೇರಿ ಜೈನರ ಓಣಿಯಲ್ಲಿ ಮೂರು ಪ್ರಕರಣಗಳಿವೆ.
ಕಲಘಟಗಿ_ತಾಲೂಕು:- ಬೆಲವಂತರ ಹಾಗೂ #ಹಾವೇರಿ ಜಿಲ್ಲೆ #ಸವಣೂರ ತಾಲೂಕ ತಿನ್ನಾಪೂರ, ತೆವರಮೆಳ್ಳಹಳ್ಳಿ, ಶಿಗ್ಗಾಂವಿಯ ಕುಂಬಾರ ಓಣಿ, ಖಾನಾಪೂರ ತಾಲೂಕ ಇಟಗಿ, ವಿಜಯಪುರದ ಕೆ.ಎಚ್.ಬಿ.ಕಾಲೋನಿ, ಕಿತ್ತೂರಿನ ಗುರುವಾರ ಪೇಟ, ನರಗುಂದ ತಾಲೂಕಿನ ಕೊಣ್ಣೂರ, ಸವದತ್ತಿ ತಾಲೂಕಿನ ಚಿಕ್ಕುಂಬಿಯಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.
Leave a Comment