ಹಳಿಯಾಳ:- ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ನಿರ್ಮಾಣ ಕರ್ಯಕ್ಕೆ ದಿ.೫ ಬುಧವಾರದಂದು ಭೂಮಿ ಪೂಜೆ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ ಎಲ್ಲರೂ ತಮ್ಮ ಮನೆ, ಮಂದಿರಗಳಲ್ಲಿ ಬಡಾವಣೆಗಳಲ್ಲಿರುವ ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಸಂಭ್ರಮಿಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಕರೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕ ನೀಡಿರುವ ಅವರು ಪ್ರಭು ಶ್ರೀರಾಮ ಮಂದಿರ ನಿರ್ಮಾಣ ಕರ್ಯಕ್ಕೆ ಚಾಲನೆ ದೊರೆಯುತ್ತಿರುವ ಈ ಐತಿಹಾಸಿಕ ದಿನದಂದು ದೀಪಾವಳಿಯಂತೆ ವಿಶೇಷವಾಗಿ ಸಂಭ್ರಮಿಸಬೇಕು ಎಂದಿರುವ ಅವರು ಕೊವಿಡ್-೧೯ ಮಹಾಮಾರಿ ಹಿನ್ನೆಲೆಯಲ್ಲಿ ಎಲ್ಲಿಯೂ ಸಾರ್ವಜನೀಕ ಕರ್ಯಕ್ರಮಗಳು ಆಯೋಜಿಸಿಲ್ಲ ಹೀಗಾಗಿ ಎಲ್ಲರೂ ತಮ್ಮ ತಮ್ಮ ಮನೆ, ಮನೆಯ ಹೊರಗೆ ಅಂಗಳದಲ್ಲಿ, ಬಡಾವಣೆ, ಗಲ್ಲಿಯ ಎಲ್ಲ ದೇವಸ್ಥಾನಗಳಲ್ಲಿ ದೀಪ ಬೆಳಗಿಸಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಜೊತೆಗೆ ಕೊರೊನಾ ಮಹಾಮಾರಿ ವಿಶ್ವದಿಂದ ದೂರವಾಗಲೆಂದು ಪ್ರಾರ್ಥಿಸೋಣ ಎಂದು ಹೆಗಡೆ ಹೇಳಿದರು.
ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಹಾಗೂ ಉತ್ತರ ಪ್ರದೇಶದಲ್ಲಿ ಮುಲಾಯಂಸಿAಗ್ ಸರ್ಕಾರ ಕರಸೇವಕರ ಮೇಲೆ ನಡೆಸಿದ ದೌರ್ಜನ್ಯ ಎಂದಿಗೂ ಮರೆಯುವಂತದ್ದಲ್ಲ ಅಂದು ರಾಮ ಮಂದಿರಕ್ಕಾಗಿ ಸಾವಿರಾರು ಜನ ಕರಸೇವಕರು ತ್ಯಾಗ, ಬಲಿದಾನ ಮಾಡಿದ್ದು ಅವರನ್ನು ರಾಮ ಮಂದಿರ ಭೂಮಿ ಪೂಜೆಯ ದಿನ ನೆನೆಯುವಂತಹ ಕೆಲಸ ಆಗಬೇಕು. ಅವರ ನಿಸ್ವಾರ್ಥದ ತ್ಯಾಗ ಬಲಿದಾನ ಎಂದಿಗೂ ಅಜರಾಮರವಾಗಿದೆ ಎಂದು ಮಾಜಿ ಶಾಸಕರು ಹೇಳಿದರು.

Leave a Comment