ಹಳಿಯಾಳ:- ಪ್ಲಾಸ್ಟಿಕ್ ಧ್ವಜ ಹಾಗೂ ಪ್ಲಾಸ್ಟಿಕ್ ಮಾಸ್ಕ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿದರು.
ಅಗಸ್ಟ್ 15 ಸ್ವಾತಂತ್ರೋತ್ಸವ ಅಂಗವಾಗಿ ಈ ಪ್ಲಾಸ್ಟಿಕ್ ಧ್ವಜ ಹಾಗೂ ಮಾಸ್ಕ್ ಮಾರಾಟ ಮಾಡುವುದು ಕಂಡು ಬರುತ್ತಿರುವ ಕಾರಣ ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕೆಂದು ಸಂಘಟನೆ ಆಗ್ರಹಿಸಿದೆ.
ಮನವಿ ಸಲ್ಲಿಸುವಾಗ ಘಟ್ಟದ ಮೇಲಿನ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ, ಪ್ರಮುಖರಾದ ಮಹಾದೇವ, ಸಂಜು ಚಲವಾದಿ, ಗಣೇಶ ವಿಕೆ, ವಿನೋದ ಗಿಂಡೆ, ಅಮರನಾಥ ಸ್ವಾಮಿ, ಈಶ್ವರ, ಸಾಹಸ ಇತರರು ಇದ್ದರು.
Leave a Comment