• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಳೆ ನಿಲ್ಲದಿದ್ದರೇ ಪ್ರವಾಹ ಪಕ್ಕಾ ? ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಚೀಫ್ ಇಂಜನಿಯರಗಳ ಮಧ್ಯೆ ವಿಡಿಯೊ ಕಾನ್ಫರೆನ್ಸ: ನೆರೆ(ಪ್ರವಾಹ)ಯ ಮಾಹಿತಿ ವಿನಿಮಯ ?

August 17, 2020 by Yogaraj SK Leave a Comment

ಬೆಳಗಾವಿ :- ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮುಖ್ಯ ಅಭಿಯಂತರು ಇಂದು ರವಿವಾರ ಮಧ್ಯಾನ್ಹ 2 ಗಂಟೆಗೆ ಝೂಮ್ ಮೂಲಕ ವಿಡಿಯೊ ಕಾನ್ಫರೆನ್ಸ ನಡೆಸಿ ಸಂಭವನಿಯ ಪ್ರವಾಹ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು.ಕೃಷ್ಣಾ ಮೇಲ್ದಂಡೆ ಯೋಜನೆಯ ಚೀಫ್ ಇಂಜನಿಯರ್ ಆರ್.ಪಿ.ಕುಲಕರ್ಣಿ,ನಾರಾಯಣಪುರ ಚೀಫ್ ಇಂಜನಿಯರ್ ರಂಗರಾಮ ಮತ್ತು
ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ನಿಗಮದ ಚೀಫ್ ಇಂಜನಿಯರ್ ಗುಣಾಲೆ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೊಯ್ನಾ ಒಳ,ಹೊರಹರಿವು
ಮತ್ತಷ್ಟು ಹೆಚ್ಚಳವಾಗಿದ್ದು ಮಂಗಳವಾರ ಕೃಷ್ಣೆ
ಅಬ್ಬರ ಮತ್ತಷ್ಟು ಹೆಚ್ಚುವ ಸಾಧ್ಯತೆ!

ನವಿಲುತೀರ್ಥದಿಂದ 15 ಸಾ.ಕ್ಯೂಸೆಕ್ಸ
ಬಿಡುಗಡೆ: ಸವದತ್ತಿ,ರಾಮದುರ್ಗ, ನರಗುಂದ,ರೋಣ,ಬದಾಮ, ತಾಲೂಕುಗಳ ಗ್ರಾಮಸ್ಥರಲ್ಲಿ ಆತಂಕ.

ಹಿಡ್ಕಲ್ ಡ್ಯಾಂ 49.5 ಟಿ ಎಮ್ ಸಿ ಭರ್ತಿ
ಒಳಹರಿವು 35 ಸಾವಿರ ಕ್ಯೂಸೆಕ್ಸ:
ಹೊರಹರಿವೂ ಅಷ್ಟೇ ಸಾಧ್ಯತೆ

ಮಹಾರಾಷ್ಟ್ರದ ಸಾತಾರಾ ,ಕೊಲ್ಹಾಪುರ ಸಾಂಗ್ಲಿ ಸುತ್ತಮುತ್ತಲೂ ಧಾರಾಕಾರ ಮಳೆ ಮುಂದುವರೆದಿದ್ದು ಕೊಯ್ನಾ ಡ್ಯಾಮಿಗೆ ಹರಿದು ಬರುವ ನೀರಿನ ಪ್ರಮಾಣ ತಾಸು ತಾಸಿಗೂ ಏರುತ್ತಿದೆ.ರವಿವಾರ ಸಂಜೆ
4 ಗಂಟೆಗೆ ತಾಸಿಗೆ 47219 ಕ್ಯೂಸೆಕ್ಸ ಇದ್ದದ್ದು 5 ಗಂಟೆಗೆ ಒಮ್ಮೆಲೇ 83877 ಕ್ಯೂಸೆಕ್ಸ ತಲುಪಿದೆ.105 ಟಿ ಎಮ್ ಸಿ ಸಾಮರ್ಥ್ಯದ
ಡ್ಯಾಮಿನಲ್ಲಿ 91.21 ಟಿ ಎಮ್ ಸಿ ಅಂದರೆ 86.66 ಪ್ರತಿಶತ ನೀರು ಭರ್ತಿಯಾಗಿದೆ.
ಹೊರಹರಿವೂ ಸಂಜೆ 5 ಕ್ಕೆ 54146 ಕ್ಯೂಸೆಕ್ಸ ಇದ್ದು ರಾತ್ರಿ ಮತ್ತೆ ಹೆಚ್ಚಲಿದೆ.
ಸದ್ಯ ಉಭಯ ರಾಜ್ಯಗಳ ಗಡಿಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಗಡಿಯ ಹತ್ತಿರದ ರಾಜಾಪುರ ಬ್ಯಾರೇಜದಿಂದ ರವಿವಾರ ಮಧ್ಯಾನ್ಹ ಒಂದು ಗಂಟೆಗೆ 90 ಸಾವಿರ ಕ್ಯೂಸೆಕ್ಸ ಹರಿದುಬರುತ್ತಿತ್ತು.ಇದರಲ್ಲಿ ಕೊಯ್ನಾ ಡ್ಯಾಂ ನೀರು ಸೇರಿಲ್ಲ.ರವಿವಾರ ಕೊಯ್ನಾದಿಂದ ಬಿಡುಗಡೆಯಾದ ನೀರು 48 ಗಂಟೆಗಳ ನಂತರ ಅಂದರೆ ಮಂಗಳವಾರ ಮಧ್ಯಾನ್ಹ ಸೇರಿದರೆ ಒಂದೂವರೆ ಲಕ್ಷ ಕ್ಯೂಸೆಕ್ಸವರೆಗೂ ಆಗಬಹುದು.
ಸದ್ಯ ವಿಜಯಪುರ ಬಳಿಯ ಆಲಮಟ್ಟಿ ಡ್ಯಾಂ ಒಳಹರಿವು 1,30,000 ಕ್ಯೂಸೆಕ್ಸ ಇದ್ದು ಹೊರಹರಿವು 1,80,000 ಕ್ಯೂಸೆಕ್ಸ ಇದೆ.ರವಿವಾರ ರಾತ್ರಿ ಇದು 2,20,000 ಆಗಬಹುದು.
ಕಳೆದ ವರ್ಷ 2019 ರ ಅಗಷ್ಟ 16 ಕ್ಕೆ
5,30,000 ಕ್ಯೂಸೆಕ್ಸ ಒಳಹರಿವು ಆಲಮಟ್ಟಿಯಲ್ಲಿತ್ತು.ಒಟ್ಟು 123 ಟಿ ಎಮ್ ಸಿ ಸಾಮರ್ಥ್ಯದ ಆಲಮಟ್ಟಿಯಲ್ಲಿ ಸದ್ಯ 113 ಟಿ ಎಮ್ ಸಿ ನೀರಿದೆ.ಮಂಗಳವಾರದವರೆಗೆ ಎರಡೂವರೆಯಿಂದ ಮೂರು ಲಕ್ಷ ಕ್ಯೂಸೆಕ್ಸವರೆಗೂ ಆಲಮಟ್ಟಿಗೆ ನೀರು ಹರಿದು ಬರಬಹುದು.4.5 ಲಕ್ಷ ಕ್ಯೂಸೆಕ್ಸ ದಾಟಿದರೆ ಮಾತ್ರ ಕಳೆದ ವರ್ಷದ ಪ್ರವಾಹದ ಭೀತಿ ಎದುರಾಗಬಹುದು.
ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಡ್ಯಾಮಿನ ಒಳಹರಿವು 24 ಸಾವಿರ ಕ್ಯೂಸೆಕ್ಸ ತಲುಪಿದೆ.ರವಿವಾರ ಸಂಜೆ 5 ಗಂಟೆಗೆ ಡ್ಯಾಮಿನಿಂದ 16 ಸಾವಿರ ಕ್ಯೂಸೆಕ್ಸ ಬಿಡಲಾಗುತ್ತಿದ್ದು ರಾತ್ರಿಗೆ ಇದು 17 ಸಾವಿರಕ್ಕೆ ತಲುಪಬಹುದು.(ಡ್ಯಾಮಿನಿಂದ ನೀರು ಬಿಟ್ಟ ವಿಡಿಯೊ ಹಾಕಲಾಗಿದೆ)
ಸವದತ್ತಿ,ರಾಮದುರ್ಗ ತಾಲೂಕುಗಳ ನದಿ ತೀರದ ಊರುಗಳ ಜನರು ಹಗಲಿರುಳು ನದಿಗೆ ಹರಿದುಬರುತ್ತಿರುವ ನೀರಿನ ಮೇಲೆ ನಿಗಾ ಇರಿಸಿದ್ದಾರೆ.ರಾಮದುರ್ಗ ತಾಲೂಕಿನ ತೊರಗಲ್ಲ,ಗೊಣಗನೂರ,ಸುನ್ನಾಳ,ಘಟಕನೂರ,ಹಲಗತ್ತಿ,ಹಂಪಿಹೊಳಿ,ಅವರಾದಿ,ಸಂಗಳ, ನರಗುಂದ ತಾಲೂಕಿನ ಲಕಮಾಪುರ,ಬೆಳ್ಳೇರಿ,ವಾಸನ,ಕೊಣ್ಣೂರು,ಶಿರೋಳ
ರೋಣ ತಾಲೂಕಿನ ಗುಳಗಂಜಿ,ಮೆಣಸಗಿ,ಹೊಳೆಮಣ್ಣೂರ,ಗಾಡಗೋಳ,ಹೊಳೆಆಲೂರ,ಕುರುವಿನಕೊಪ್ಪ,ಅಮರಗೋಳ,ಹೊಳೆಹಡಗಲಿ,ಬಸರಕೋಡ,
ಬದಾಮಿ ತಾಲೂಕಿನ ಗೋವನಕೊಪ್ಪ,ಸುಳ್ಳ,ಕಿತ್ತಲಿ,ಜಕನೂರ,ಬೂದಿಹಾಳ,ನೀರಲಗಿ,ತನ್ನೀಹಾಳ,ಕಾಕರಕಿ,ಮುಮರಡ್ಡಿಕೊಪ್ಪ,ಖ್ಯಾಡ,ಮನ್ನೇರಿ,ಢಾಕನಶಿರೂರು,ಪಟ್ಟದಕಲ್ಲು ಗ್ರಾಮಗಳಲ್ಲಿ ಸದ್ಯ ಪ್ರವಾಹ ಮುನ್ಸೂಚನೆ ನೀಡಲಾಗುತ್ತಿದೆ.
ನದಿ ತೀರದ ಪ್ರವಾಹ ಪೀಡಿತ ಜನರನ್ನು ಎಲ್ಲಿಗೆ ಸ್ಥಳಾಂತರಿಸಬೇಕೆಂಬ ಬಗ್ಗೆ ತಾಲೂಕಾ ಆಡಳಿತ,ಪಿಡಿಓ ಗಳು ನಿರ್ಧರಿಸುತ್ತಿದ್ದು ಊಟ,ವಸತಿಯ ಸಿದ್ಧತೆಗಳು ನಡೆದಿವೆ.
ರಾಮದುರ್ಗ ಸುರೇಬಾನ ನಡುವಣ ಹಳೆಯ ಸೇತುವೆ,ಮುನವಳ್ಳಿಯ ಹಳೆಯ ಸೇತುವೆ ಮತ್ತು ಹೊಳೆ ಆಲೂರು ಬದಾಮಿ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.ಆದರೆ ಬದಾಮಿ ತಾಲೂಕಿನ ಕೊನೆಯ ಗ್ರಾಮವಾದ ಗೋವನಕೊಪ್ಪ ಮತ್ತು ನರಗುಂದ ತಾಲೂಕಿನ ಕೊಣ್ಣೂರು ಮಧ್ಯದ ಹೊಸಸೇತುವೆಯ ಸಂಚಾರ ಮುಂದುವರೆದಿದೆ.
ಕೊಯ್ನಾದಿಂದ ಇಂದು,ನಾಳೆ,ನಾಡದ್ದು ಬಿಡುಗಡೆಯಾಗುವ ನೀರು 48 ಗಂಟೆಗಳ ಅಂತರದಲ್ಲಿ ಕರ್ನಾಟಕವನ್ನು ಪ್ರವೇಶಿಸಲಿದ್ದು ಕೃಷ್ಣೆಯ ಪ್ರವಾಹದ ಸ್ಥಿತಿಯನ್ನು ನಿರ್ಧಿಷ್ಟ ದಿಕ್ಕನ್ನು ತೋರಿಸಲಿದೆ.ಪ್ರವಾಹವನ್ನು
ಯುದ್ಧೋಪಾದಿಯಲ್ಲಿ ಎದುರಿಸಲು
ಬೆಳಗಾವಿಯಿಂದ ಬೀದರವರೆಗೆ ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳೊಂದಿಗೆ ಇರಬೇಕು.ಪರಿಹಾರ ಕೇಂದ್ರಗಳಲ್ಲಿಯ ಬೇಕು ಬೇಡಗಳಿಗೆ ಸ್ಪಂದಿಸಬೇಕು.ಇದು ಜನತೆಯ
ಹಕ್ಕೋತ್ತಾಯ.
ಅಶೋಕ ಚಂದರಗಿ,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ,ಬೆಳಗಾವಿ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karnataka News, Trending Tagged With: ಆಲೂರು ಬದಾಮಿ ಸೇತುವೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕೊಯ್ನಾ ಒಳ, ಚೀಫ್ ಇಂಜನಿಯರ್ ಆರ್.ಪಿ.ಕುಲಕರ್ಣಿ, ಡ್ಯಾಮಿನ ಒಳಹರಿವು, ನವಿಲುತೀರ್ಥ, ನಾರಾಯಣಪುರ ಚೀಫ್ ಇಂಜನಿಯರ್ ರಂಗರಾಮ, ಹೊರಹರಿವು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar