ಹಳಿಯಾಳ :- ಶನಿವಾರ ತಾಲೂಕಿನ 16 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಗ್ರಾಮಾಂತರ ಭಾಗದ ಓರ್ವ ವೃದ್ದ, ಓರ್ವ ವೃದ್ದೆ ಮತ್ತು ಪಟ್ಟಣದ ಓರ್ವ ಮಹಿಳೆ ಹೀಗೆ ಒಂದೇ ದಿನ ಮೂವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರಿಂದ ಶನಿವಾರ ಹಳಿಯಾಳಕ್ಕೆ ಶಾಪವಾಗಿ ಪರಿಣಮಿಸಿದಂತಾಗಿದೆ.
ಪಟ್ಟಣದ ಕೆಎಚ್ಬಿ(ಆನೆಗುಂದಿ) ಕಾಲೋನಿ ನಿವಾಸಿ 40 ವರ್ಷದ ಮಹಿಳೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗಿಡಾಗಿದ್ದರೇ ಬೆಳವಟಗಿಯ 67 ವರ್ಷದ ವೃದ್ದೆ ಮತ್ತು ಮಲವಡಿಯ 68 ವರ್ಷದ ವೃದ್ದ ಕಾರವಾರದ ಜಿಲ್ಲಾ ಕೊವಿಡ್ ಚಿಕಿತ್ಸಾ ಕೇಂದ್ರದಲ್ಲಿ ಕೊರೊನಾಕ್ಕೆ ಉಸಿರು ಚೆಲ್ಲಿದ್ದು ಶನಿವಾರ ಒಂದೇ ದಿನ ಮೂವರು ಕೊವಿಡ್ನಿಂದ ಮೃತಪಡುವ ಮೂಲಕ ತಾಲೂಕಿನಲ್ಲಿ ಈವರೆಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 8 ರಿಂದ 11 ಕ್ಕೆ ಏರಿಕೆಯಾಗಿದೆ.

ಶನಿವಾರ ಹಳಿಯಾಳ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ 39 ಜನರಲ್ಲಿ ನಡೆಸಿದ ರ್ಯಾಪಿಡ್ ಟೆಸ್ಟ್ನಲ್ಲಿ 11 ಜನರಲ್ಲಿ ಹಾಗೂ ಗಂಟಲು ದ್ರವ ಪರೀಕ್ಷೆಯಲ್ಲಿ 5 ಹೀಗೆ ಒಟ್ಟೂ 16 ಜನರಲ್ಲಿ ಸೊಂಕು ದೃಢಪಟ್ಟಿದೆ.
ಹಳಿಯಾಳ ಪಟ್ಟಣವೊಂದರಲ್ಲೇ 11, ತೇರಗಾಂವ,ಖಾಮಡೊಳ್ಳಿ, ಮುರ್ಕವಾಡ, ಅಡ್ಡಿಗೇರಾ ಗ್ರಾಮಗಳಲ್ಲಿ ತಲಾ ಒಬ್ಬರಲ್ಲಿ ಮತ್ತು ಹೊರಗಿನಿಂದ ಬಂದ ಓರ್ವ ವ್ಯಕ್ತಿಗೆ ಸೊಂಕು ತಗುಲಿದೆ. ಶನಿವಾರ ಒಟ್ಟೂ 5 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ತಾಲೂಕಿನಲ್ಲಿ ಸದ್ಯ ಒಟ್ಟೂ ಸೊಂಕಿತರ ಸಂಖ್ಯೆ 451 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 372 ಜನ ಗುಣಮುಖರಾಗಿದ್ದರೇ 68 ಸಕ್ರಿಯ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
Leave a Comment