ರಾಜ್ಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಜಾರಿಯಾದ ಕಾಂಗ್ರೇಸ್ ಪಕ್ಷದ “ಆರೋಗ್ಯ ಹಸ್ತ” ಕಾರ್ಯಕ್ರಮದಡಿ ಜೋಯಿಡಾ ತಾಲೂಕಿನ ಎಲ್ಲಾ 16 ಗ್ರಾಮ ಪಂಚಾಯತ್ಗಳ ಕಾಂಗ್ರೇಸ್ ಪಕ್ಷದ ಕೊರೋನಾ ವಾರಿಯರ್ಸ್ಗಳಿಗೆ ಕೊರೋನಾ ತಪಾಸಣಾ ಕಿಟ್ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೊರೋನಾ ವಾರಿಯರಸ್ಗಳು ಜನರ ಆರೋಗ್ಯವನ್ನು ಹೇಗೆ ತಪಾಸಣೆ ಮಾಡಬೇಕು, ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಮತ್ತು ಮಾಹಿತಿಯನ್ನು ನೀಡಬೇಕೆನ್ನುವುದರ ಪ್ರಾತ್ಯಕ್ಷಿಕೆ ನಡೆಸಲಾಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ವಾರಿಯರ್ಸ್ಗಳಿಗೆ ಸೂಕ್ತ ತಿಳುವಳಿಕೆಯನ್ನು ನೀಡಿದರು.
ಜೋಯಿಡಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬಗಾರ ಪಕ್ಷದ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದರು. ದಾಂಡೇಲಿಯ ವಕೀಲರಾದ ವಿ.ಆರ್.ಹೆಗಡೆ, ಕಾಂಗ್ರೇಸ ಪಕ್ಷದ ಧಾರವಾಡದ ಜಿ.ಡಿ.ಘೋರ್ಪಡೆ, ಆರ್.ಐ. ಡಂಬಿನಾಳ, ಇತರರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸಂದರ್ಬದಲ್ಲಿ ಜಿ.ಪಂ.ಸದಸ್ಯ ರಮೇಶ ನಾಯ್ಕ, ತಾ.ಪಂ. ಉಪಾಧ್ಯಕ್ಷ ವಿಜಯ ಪಂಡಿತ, ಪ್ರಮುಖರಾದ ಮಂಜುನಾಥ ಮೋಕಾಶಿ, ಆರ್.ಎ.ಭಟ್ಟ, ಅರುಣ ದೇಸಾಯಿ, ಮಂಜುನಾಥ ಭಾಗ್ವತ, ಗಜಾನನ ದೇಸಾಯಿ,ರಾಜಶ್ರೀ ಕುಂಬಾರ ಸೇರಿದಂತೆ ಪಕ್ಷದ ಹಲವರು ಉಪಸ್ಥಿತರಿದ್ದರು.

Leave a Comment