ಯಲ್ಲಾಪುರ:
ತಾಲೂಕಿನ ಕಣ್ಣಿಗೇರಿ ಗ್ರಾ.ಪಂ.ವ್ಯಾಪ್ತಿಯ ವಡೆಹುಕ್ಕಳಿ ಬಸ್ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು, ನಾಗರಿಕರ ಸುರಕ್ಷಿತತೆಯ ದೃಷ್ಠಿಯಿಂದ ಬಸ್ ತಂಗುದಾಣ ನವಿಕರಿಸಬೇಕೆಂದು ಸ್ಥಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಸ್ ತಂಗುದಾಣ ಗ್ರಾಮೀಣ ಭಾಗದ ಜನಸಂಪರ್ಕ ಕೇಂದ್ರವಾಗಿದ್ದು, ಪ್ರತಿನಿತ್ಯ ಬಸ್ ಕಾಯ್ಯಲು ಇಲ್ಲಿನ ಸುತ್ತಮುತ್ತಲಿನ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವಯೋವೃದ್ದರು ನೂರಾರು ಜನ ಬಸ್ ತಂಗುದಾಣ ವನ್ನು ಆಶ್ರಯಿಸುತ್ತಾರೆ. ಆದರೆ ಬಸ್ ತಂಗುದಾಣದ ಸ್ಥತಿ ಅಯೋಮಯವಾಗಿದೆ. ಮರ ಬಿದ್ದು, ಶಿಥಿಲಗೊಂಡಿದೆ. ಗೋಡೆ ಬಿರುಕುಬಿಟ್ಟಿದೆ. ಮೆಲ್ಛಾವಣಿಯ ತಗಡು ಒಡೆದುಹೋಗಿದೆ. ಬಣ್ಣ ಮಾಸಿದೆ. ನೆಲಹಾಸಿನ ಸಿಮೆಂಟ್ ಕಿತ್ತುಹೋಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಟಿ.ಎಸ್.ಎಸ್ ನವರು ಬಣ್ಣಬಳಿದು ಜಾಹಿರಾತು ಬರೆದದ್ದು ಬಿಟ್ಟರೆ, ಇದರ ನಿರ್ವಹಣೆಯ ಬಗ್ಗೆ ಸ್ಥಳಿಯ ಆಡಳಿತ ನಿರ್ಲಕ್ಯ ತಾಳಿದೆ.
ಬಸ್ ತಂಗುದಾಣಕ್ಕೆ ನಾಮಫಲಕವೇ ಇಲ್ಲ! ಅವ್ಯವಸ್ಥೆಯ ಆಗರವಾದ ಸದ್ರಿ ಬಸ್ ತಂಗುದಾಣವನ್ನು ಸಚಿವ ಶಿವರಾಮ ಹೆಬ್ಬಾರ, ಹಾಗೂ ವಾ.ಕ.ರಾ.ರಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಗಮನ ಹರಿಸಿ ಸುಸಜ್ಜಿತವಾಗಿನಿರ್ಮಿಸಿ ಕೊಡಬೇಕೆಂದು ಹುಕ್ಕಳಿ, ದುರ್ಗದ, ನರಸೂರ, ದೇಸಾಯಿಕೇರಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Leave a Comment