ಹೊನ್ನಾವರ: ಕಳೆದ ನಾಲ್ಕು ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ, ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಹಾನಿ ಸಂಭವಿಸಿದೆ. ಗುಡ್ಡಕುಸಿತ ಮತ್ತು ಮರಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯಾಗಿದೆ.
ಕೊಡಾಣಿಯಯಲ್ಲಿ ವೆಂಕಟ್ರಮಣ ನಾರಾಯಣ ಹೆಗಡೆ ಅವರ ಮನೆಯ ಮೇಲೆ ಗುಡ್ಡದ ಮಣ್ಣು ಜಾರಿ ಬಂದು ಮನೆಯು ಸಂಪೂರ್ಣ ನೆಲಸಮವಾಗಿದೆ. ಮನೆಯೊಳಗಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಅಡಕೆ ಮಣ್ಣಿನಲ್ಲಿ ಹೂತು ಹೋಗಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ಅಕ್ಕಿ, ಬೇಳೆಕಾಳುಗಳು ಹಾನಿಯಾಗಿವೆ.

ಹಡಿನಬಾಳದಲ್ಲಿ ಮಂಜುನಾಥ ಗಣೇಶ ಹೆಗಡೆ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಸಾಮಗ್ರಿಗಳು ಹಾನಿಯಾಗಿವೆ. ಮಂಕಿಯ ತಾಳಮಕ್ಕಿಯಲ್ಲಿ ನಾರಾಯಣ ತಿಪ್ಪಯ್ಯ ನಾಯ್ಕ ಅವರ ಮನೆಯು ಗಾಳಿಮಳೆಯಿಂದ ಹಾನಿಗೊಳಗಾಗಿದೆ. ಹಾನಿಗೊಳಗಾದ ಸ್ಥಳಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಕ್ರಮ ಕೈಗೊಂಡಿದ್ದಾರೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶರಾವತಿಮತ್ತು ಗುಂಡಬಾಳನದಿಯ ತೀರದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಭಾನುವಾರ ಸಂಜೆ ವೇಳೆ ಮಳೆಯು ಕಡಿಮೆಯಾಗಿದೆ. ಆದರೆ ಸೋಮವಾರ ಮುಂಜಾನೆಯಿಂದ ಬಿಡುವು ತೆಗೆದುಕೊಂಡ ಮಳೆಯಿಂದಾಗಿ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.


Leave a Comment