ಭಟ್ಕಳ: ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪೊಲೀಸ್ ಇಲಾಖೆಯ ಆಯ್ಕೆ ಲೀಸ್ಟ್ನಲ್ಲಿ ಹೆಸರು ಪ್ರಕಟಿಸಲ್ಪಟ್ಟ ಭಟ್ಕಳ ತಾಲೂಕಿನ ಹಡೀನ ನಿವಾಸಿ ಮಮತಾ ಶಂಕರ ನಾಯ್ಕ ಅವರ ಮನೆಗೆ ತೆರಳಿದ ಜಿಲ್ಲಾ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರವಿ ನಾಯ್ಕ ಜಾಲಿ ಹಾಗೂ ಇತರರು ಮಮತಾ ನಾಯ್ಕ ಅವರನ್ನು ಗೌರವಿಸಿದರು.
ಬಿ.ಜೆ.ಪಿ. ಹಿಂದುಳಿದ ವರ್ಗಗಳ ತಾಲೂಕಾ ಅಧ್ಯಕ್ಷ ಲಕ್ಷೀನಾರಾಯಣ ನಾಯ್ಕ, ತಾಲೂಕಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ ಸೇರಿದಂತೆ ವಿವಿಧ ಪದಾಧಿಕಾರಿಗಳು, ನಾಗರೀಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment