ಕಾರವಾರ: ಅಲೆಯ ಅಬ್ಬರಕ್ಕೆ ಲಂಗರು ಹಾಕಿದ್ದ ಒಂದು ಬೋಟ್ ಹಾಗೂ ಪಾತಿದೋಣಿಯೊಂದು ದಡಕ್ಕೆ ಅಪ್ಪಳಿಸಿ ಹಾನಿಗೊಳಗಾಗಿರುವ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ.ಕಳೆದ ಎರಡು ದಿನಗಳಿಂದ ಉತ್ತರಕನ್ನಡ ಜಿಲ್ಕೆಯಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕಡಲಿನಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದೆ. ಪರಿಣಾಮ ಮೀನುಗಾರಿಕೆಗೆ ತೆರಳಿದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಬೋಟ್ ಗಳು ಸೇರಿ ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದ ಬಳಿ ಲಂಗರು ಹಾಕಿವೆ.ಆದರೆ ಹೀಗೆ ಲಂಗರು ಹಾಕಿದ್ದ ಮಜ್ದೂರ್ ಮತ್ತು ಪ್ರಾವಿನೆನ್ಸ್ ಹೆಸರಿನ ಎರಡು ಮೀನುಗಾರಿಕಾ ಬೋಟುಗಳು ಆ್ಯಂಕರ್ ತುಂಡಾದ ಪರಿಣಾಮ ದಡಕ್ಕೆ ಬಂದು ಅಪ್ಪಳಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಒಂದು ಪಾತಿ ದೋಣಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.ಮಳೆಯಿಂದಾಗಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಬಂದರು ವ್ಯಾಪ್ತಿಯಲ್ಲಿ ಮಲ್ಪೆ ಮಂಗಳೂರು ಭಾಗದ ಬೋಟ್ ಗಳು ಲಂಗರು ಹಾಕಿವೆ. ಇಂದೂ ಸಹ ಮಳೆ ಹಿನ್ನಲೆ ಬಂದರು ಬಳಿಯೇ ಬೀಡುಬಿಟ್ಟಿವೆ.
Leave a Comment