ಹಳಿಯಾಳ:- ಉತ್ತರ ಪ್ರದೇಶದ ಹತ್ರಾಸ ಬಲಗುಡಿ ಗ್ರಾಮದಲ್ಲಿ ದಲಿತ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕೆಂದು ದಲಿತ ಸಂಘರ್ಷ ಸಮೀತಿ (ಕೆಂಪು ಸೇನೆ) ಸಂಘಟನೆ ಆಗ್ರಹಿಸಿದೆ.
ಇಲ್ಲಿಯ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಪ್ರಧಾನಿ ನರೇಂಧ್ರ ಮೊದಿಯವರ ಹೆಸರಿನಲ್ಲಿದ್ದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದ ಸಂಘಟನೆಯವರು ಕೃತ್ಯದಲ್ಲಿ ಭಾಗಿಯಾದ ಹಾಗೂ ಪ್ರಚೋದನೆ ನೀಡಿದ ಎಲ್ಲರ ಮೇಲೂ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವಾಗ ಉತ್ತರ ಕರ್ನಾಟಕ ಅಧ್ಯಕ್ಷ ವಿಬಿ ರಾಮಚಂದ್ರ, ಮಹಿಳಾ ಅಧ್ಯಕ್ಷೆ ಜಯಲಕ್ಷ್ಮೀ ಚವ್ವಾಣ, ಪ್ರಮುಖರಾದ ಶಕಿಲ ಚೌಕಿದಾರ, ಶರಣಪ್ಪಾ ವಡ್ಡರ, ರಾಜು ಕುರುಬರ, ರೂಪಾ ವಡ್ಡರ, ಮುಕುಂದ ಕಿನಗೇಕರ, ಸುವರ್ಣಾ ವಡ್ಡರ, ಲಲಿತಾ ವಡ್ಡರ ಇದ್ದರು.
Leave a Comment