• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಟ್ಟಣದ ಒಳಚರಂಡಿ ಅವ್ಯವಸ್ಥೆಗೆ ಸಾರ್ವಜನಿಕರಿಂದ ಆಕ್ರೋಶ ಕಾಮಾಗಾರಿಯನ್ನು ಸಮರ್ಪಕವಾಗಿ ನಡೆಸುವಂತೆ ಆಗ್ರಹ

October 31, 2020 by Vishwanath Shetty Leave a Comment

ಹೊನ್ನಾವರ ಪಟ್ಟಣದಲ್ಲಿ ಒಳಚರಂಡಿ ಕರ್ಮಕಾಂಡ ಇಂದು ನಿನ್ನೆಯದಲ್ಲ. ನಾಲ್ಕು ವರ್ಷದಿಂದ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಎಡೆಮಾಡಿಕೊಡುವ ಒಳಚರಂಡಿ ಯೋಜನೆ ಪಟ್ಟಣದ ನಿವಾಸಿಗಳಿಗೆ ಸಮಸ್ಯೆ ಆಗಿ ಕಾಡುತ್ತಿದೆ. ಸರ್ಕಾರ ಬದಲಾಗಿ ಜನಪ್ರತಿನಿಧಿಗಳು ಬದಲಾದರೂ ಈ ಸಮಸ್ಯೆ ಮಾತ್ರ ಬದಲಾಗಿಲ್ಲ. ಪಟ್ಟಣದಲ್ಲಿ ಈಗಲೂ ರಸ್ತೆ ಹೊಂಡಮಯವಾಗಿದ್ದು, ಒಳಚರಂಡಿ ಯೋಜನೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಂದು ಬಾಗದಲ್ಲಿ ಕೆಲಸ ಆರಂಭಿಸಿ ಕೆಲ ದಿನ ಬಿಟ್ಟು, ಮತ್ತೊಂದಡೆ ಕೆಲಸ ಆರಂಭಿಸುತ್ತಾರೆ. ನೀಲಿನಕ್ಷೆ ಸರಿ ಇಲ್ಲ. ಇವರು ಗುರುತು ಮಾಡುವ ಸ್ಥಳ ಒಂದು ಕೆಲಸ ಮಾಡುವ ಸ್ಥಳ ಇನ್ನೊಂದು, ಮಾಡಿದ ಕೆಲಸ ಕಳಪೆ ಎನ್ನುವ ಆರೋಪವು ಇದೆ. ಈ ಮಧ್ಯೆ ಒಂದು ಕಡೆ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣ ಕಾರ್ಯ ಎರಡು ವರ್ಷದ ಬಳಿಕ ಮತ್ತೆ ಆರಂಭಿಸಿರುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

watermarked IMG20201029151058 scaled
watermarked IMG20201029145952 scaled

ಕಳೆದ ಹಲವು ವರ್ಷದಿಂದ ರಸ್ತೆ ದುವ್ಯವಸ್ಥೆಗೆ ಕಾರಣವಾಗಿರುವ ಒಳಚರಂಡಿ ಕರ್ಮಕಾಂಡ ಮತ್ತೆ ಪಟ್ಟಣ ನಿವಾಸಿಗಳ ನಿದ್ದೆಗೆಡಿಸಿದೆ. ಇದೇ ಭಾಗದಲ್ಲಿ ಎರಡು ವರ್ಷದ ಹಿಂದೆ ಛೆಂಬರ್ ನಿರ್ಮಿಸಿ ರಸ್ತೆ ಅವ್ಯವಸ್ಥೆ ಮಾಡಿ ಹೋಗಿದ್ದರು. ಬಳಿಕ ಇತ್ತ ತಲೆ ಹಾಕದೇ ಬೇರಡೆ ಕೆಲಸದಲ್ಲಿ ಮಗ್ನರಾದರು. ಬಳಿಕ ಶಾಸಕರಿಗೆ, ಪಟ್ಟಣ ಪಂಚಾಯತಿಗೆ ಮನವಿ ನೀಡಿ ಕಾಡಿಬೇಡಿ ಈ ಭಾಗದ ರಸ್ತೆ ಪುಟ್ ಬ್ರಿಜ್ ಸರಿಪಡಿಸಿಕೊಂಡಿದ್ದು ಇದೀಗ ಮತ್ತೆ ಜೆಸಿಬಿ ತಂದು ಹಾಳು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕೆಲಸವನ್ನು ತಡೆಯಲು ಮುಂದಾದರು. ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸ್ಥಳಕ್ಕೆ ಬರುವಂತೆ ತಿಳಿಸಿದರು.
ಸಾರ್ವಜನಿಕರ ವಿರೋಧ ಹೆಚ್ಚಾಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತ್ವರಿತವಾಗಿ ಕಾಮಗಾರಿ ನಡೆಸುತ್ತೇವೆ ರಸ್ತೆ ಗಟಾರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು.
…………………………
ಎರಡು ವರ್ಷದ ಹಿಂದೆ ಕೆಲಸ ಮಾಡಿ ಹೋದವರು ಮತ್ತೆ ಇಲ್ಲಿಗೆ ಆಗಮಿಸಿದ್ದಾರೆ. ರಸ್ತೆ ಮೇಲೆ ಹಿಟಾಚಿ ತೆಗೆದುಕೊಂಡು ಹೋಗಿ ರಸ್ತೆ ಹಾಳು ಮಾಡುತ್ತಿದ್ದಾರೆ. ಒಳಚರಂಡಿ ಕಾಮಗಾರಿ ಸರಿಯಾಗಿ ನಿಭಾಹಿಸದೆ, ಕಳೆದ ಬಾರಿ ಕೆಲಸ ಮಾಡಲು ಬಂದು ಗಟಾರ, ಕಂಪೌಡ್ ಹಾನಿಗೊಳಿಸಿ ಹೋಗಿದ್ದಾರೆ ಅದನ್ನು ಮೊದಲು ಸರಿ ಪಡಿಸಿ ಹೋಗುವಂತೆ ಆಗ್ರಹಿಸಿದರು.
ಸ್ಥಳಿಯ ನಿವಾಸಿ ಸತೀಶ ನಾಯ್ಕ

……………………………..
ನನ್ನ ವಾರ್ಡ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನದಿಂದ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಹಲವಡೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕೆಲಸ ಮಾಡಲು ಸೂಚನೆ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮತ್ತೆ ಅದೇ ತಪ್ಪು ನಡೆದರೆ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ
ವಾರ್ಡ ಸದಸ್ಯೆ ಮೇಧಾ ನಾಯ್ಕ
………….

ಕಳೆದ ಹಲವು ವರ್ಷದಿಂದ ಹೋರಾಟ ಪ್ರತಿಭಟನೆ ನಡೆದರೂ ಈ ಬಗ್ಗೆ ಇದುವರೆಗೂ ಸಮರ್ಪಕವಾಗಿ ಕಮಗರಿ ನಡೆಸುತ್ತಿಲ್ಲ. ಜನಪ್ರತಿನಿಧಿಗಳು ವಿರೋಧ ಪಕ್ಷ ಇದ್ದಾಗ ಹೋರಾಟ ಆಡಳಿತ ಪಕ್ಷಕ್ಕೆ ಬಂದ ಸಮಜಾಯಿಸಿ ಎಚ್ಚರಿಕೆ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಜನಪ್ರತಿನಿಧಿಗಳು ಅಧಿಕಾರಿಗಳ ನಿಲಕ್ಷದಿಂದ ಸಾರ್ವಜನಿಕರಿಗೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಮುಂದಿನ ದಿನದಲ್ಲಾದರೂ ಎಚೆತ್ತು ಸರಿಯಾಗಿ ಕೆಲಸ ಮಾಡುತ್ತಾರಾ ಅಥವಾ ಹಳೆ ಚಾಳಿಯನ್ನು ಮುಂದುವರೆಸುತ್ತಾರೊ ಎನ್ನುವುದನ್ನು ಕಾದು ನೋಡಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: clutter for drainage project, compartment damage, gutter, part two years, problem for town dwellers, sleeping of residents, St Ignatius Hospital, ಒಳಚರಂಡಿ ಯೋಜನೆಗೆ ಹಿಡಿಶಾಪ, ಕಂಪೌಡ್ ಹಾನಿ, ಗಟಾರ, ನಿವಾಸಿಗಳ ನಿದ್ದೆಗೆಡಿಸಿದೆ, ಪಟ್ಟಣದ ನಿವಾಸಿಗಳಿಗೆ ಸಮಸ್ಯೆ ಆಗಿ, ಭಾಗದಲ್ಲಿ ಎರಡು ವರ್ಷ, ಸೆಂಟ್ ಇಗ್ನೇಶಿಯಸ್ ಆಸ್ಪತ್ರೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...