ಭಟ್ಕಳ : ತಾಲೂಕಿನ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಯಿಂದ 513.8 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು ಬಗ್ಗೆ ಪೋಲಿಸ ಪ್ರಕರಣೆಯಲ್ಲಿ ತಿಳಿಸಿದ್ದಾರೆ
ಆರೋಪಿ ಯಲ್ಲಾಪುರ ಮೂಲದ ಸತೀಶ ಭಟ್ ಎಂದು ತಿಳಿದು ಬಂದಿದ್ದು .ಈತನನ್ನು ಅಕ್ಟೋಬರ್ 23 ರಂದು ಫೋಲಿಸ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣವನ್ನು ಯಲ್ಲಾಪುರದ ಮಣಿಪುರಂ ಪೈನಾನ್ಸ ಮತ್ತು ಮುತ್ತೋಟ್ ಫೈನಾನ್ಸ್ ನಲ್ಲಿ ಅಡವಿಟ್ಟು ಹಣ ಪಡೆದಿರುವ ಬಗ್ಗೆ ತಿಳಿಸಿದಂತೆ ಮಣಿಪುರಂ ಪೈನಾನ್ಸ ಮತ್ತು ಮುತ್ತೋಟ್ ಫೈನಾನ್ಸ್ ನಿಂದ ಒಟ್ಟು 23 ಬಗೆಯ 24,15,340 ರೂಪಾಯಿಯ 513.8 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿರುವ ಬಗ್ಗೆ ಪೊಲೀಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಉ.ಕ.ಜಿಲ್ಲಾ ಎಸ್. ಪಿ. ಶಿವಪ್ರಕಾಶ ದೇವರಾಜ ,ಎಡಿಶನಲ್ ಎಸ್. ಪಿ. ಎಸ್ ಭದ್ರೀನಾಥ ಇವರ ಮಾರ್ಗದರ್ಶನ ದಲ್ಲಿ ,ಎ.ಎಸ್.ಪಿ.ನಿಖಿಲ್ ಬಿ. ಇವರ ನೇತ್ರತ್ವದಲ್ಲಿ ವಿಶೇಷಚ ತಂಡ ರಚಿಸಿ ಇದರ ಉಸ್ತುವಾರಿಯನ್ನು ಸಿ.ಪಿ.ಐ ದಿವಾಕರ ಇವರಿಗೆ ನೀಡಲಾಗಿತ್ತು, ಈ ಕಾರ್ಯಾಚರಣೆ ಯಲ್ಲಿ ಭಟ್ಕಳ ಗ್ರಾಮಾಂತರ ಠಾಣಾ ಪಿ.ಎಸ್. ಐ., ಓಂಕಾರಪ್ಪ, ನಗರ ಠಾಣಾ ಪಿ.ಎಸ್.ಐ. ಭರತಕುಮಾರ, ಮುರುಡೇಶ್ವರ ಠಾಣಾ ಪಿ.ಎಸ್ಐ. ರವೀಂದ್ರ ಬೀರಾದಾರ,ಹಾಗೂ ಗ್ರಾಮೀಣ ಠಾಣೆಯ ಎ. ಎಸ್.ಐ ಮಂಜುನಾಥ ಗೌಡರ್, ರಾಮಚಂದ್ರ ನಾಯ್ಕ , ಸಿಬ್ಬಂದಿಗಳಾದ ಮಹೇಶ ಪಟಗಾರ್, ಸಂತೋಷ ಹೊನ್ನಾಳ, ಮೋಹನ ಪೂಜಾರಿ, ದೀಪಕ ನಾಯ್ಕ, ನಾಗರಾಜ ಮೊಗೇರ , ಗಣೇಶ ಗಾಂವಕರ, ಅಶೋಕ ನಾಯ್ಕ, ದಿನೇಶ ನಾಯಕ ,ದೇವು ನಾಯ್ಕ , ಲೋಕೇಶ ಕತ್ತಿ, ರಾಜು ಗೌಡ , ಈರಣ್ಣ ಪೂಜಾರಿ, ಮಲ್ಲಿಕಾರ್ಜುನ ನಾಯ್ಕ, ಸತೀಶ ಪೂಜಾರಿ, ಮಲ್ಲಿಕಾರ್ಜುನ ಉಟಗಿ, ನಿಂಗನ ಗೌಡ ಪಾಟೀಲ್, ರವಿ ಪಟಗಾರ್ ಹಾಗೂ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಗಳಾದ ಸುಧೀರ ಮಡಿವಾಳ, ರಮೇಶ ನಾಯ್ಕ , ಅಣ್ಣಪ್ಪ ಬುಡಗೇರಿ, ಚಾಲಕರಾದ ದೇವಾರಜ್ ಮೊಗೇರ ಉಪಸ್ಥಿತರಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Comment