• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ಥಿ;ಸಾರ್ವಜನಿಕರಿಂದ ಶ್ಲಾಘನೆ

November 2, 2020 by manju sirsi Leave a Comment

ಕುಮಟಾ: ಮಳೆಗಾಲದಿಂದ ಹದಗೆಟ್ಟಿದ್ದ ಹೆಗಡೆಗೆ ತೆರಳುವ ರೈಲ್ವೇ ಗೇಟ್ ಸಮೀಪದ ಎಡಭಾಗದಿಂದ ಸಾರಿಂಗ ದೇವಸ್ಥಾನದ ಎದುರಿನ ರಸ್ತೆಯನ್ನು ಗುತ್ತಿಗೆದಾರ ಗಣೇಶ ದೇವಪ್ಪ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿಕೊಟ್ಟು ಸಮಾಜದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.

1kumata3photo2


ಕುಮಟಾದಿಂದ ಹೆಗಡೆಗೆ ತೆರಳುವ ರೈಲ್ವೇ ಗೇಟ್‍ನಿಂದ ಸಾರಿಂಗ ದೇವಸ್ಥಾನದ ಎದರಿನ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು, ರಸ್ತೆಯ ಮಣ್ಣು ಕೊಚ್ಚಿಹೋಗಿ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಸಂಚರಿಸಂದತಹ ಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ಇದನ್ನು ಗುತ್ತಿಗೆದಾರ ಗಣೇಶ ನಾಯ್ಕ ಅವರ ಗಮನಕ್ಕೆ ತಂದರು. ನಂತರ ಅವರು ನಮ್ಮ ಸ್ವಂತ ಹಣದಿಂದ ಯಂತ್ರೋಪಕರಣಗಳನ್ನು ಬಳಿಸಿ, ಕೊಚ್ಚಿಹೊದ ರಸ್ತೆಯನ್ನು ಮರು ನಿರ್ಮಿಸಿ, ಜನರಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಸಿದ್ದಾರೆ.
ಗಣೇಶ ನಾಯ್ಕ ಅವರು ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯದಲ್ಲಿ ಎಲೆ ಮರೆಯ ಕಾಯಿಯಂತೆ ಯಾವುದೇ ಪ್ರಚಾರದ ಹಂಗಿಲ್ಲದೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ರಸ್ತೆ ಪುನರ್ ನಿರ್ಮಾಣ ಮಾಡಿ, ನೂರಾರು ಸಾರ್ವಜನಿಕರಿಗೆ ಅನುಕೂಲ ಮಾಡಿರುವುದಕ್ಕೆ ಸಾರ್ವಜನಿಕರು, ಊರ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೆಗಡೆಗೆ ತೆರಳುವಾಗ ಮತ್ತು ವಾಪಸ್ಸು ಆಗಮಿಸುವಾಗ ರೈಲ್ವೇ ಗೇಟ್ ಹಾಕಿದಾಗ ನೂರಾರು ವಾಹನ ಸವಾರರು ಘಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿಯಿತ್ತು. ಸಾರ್ವಜನಿಕರಿಗೆ ಬಹಳ ಅನುಕೂಲವಾಗುವಂತಹ ಸಾರಿಂಗ ದೇವಸ್ಥಾನದ ಎದುರಿನ ರಸ್ತೆ ಮಳೆಗಾಲದಿಂದ ಸಂಪೂರ್ಣ ಹದಗೆಟ್ಟಿತ್ತು. ಇದನ್ನು ಗುತ್ತಿಗೆದಾರ ಗಣೇಶ ನಾಯ್ಕ ಅವರ ಗಮನಕ್ಕೆ ತಂದ ತಕ್ಷಣವೇ, ತಮ್ಮ ಸ್ವಂತ ಹಣದಿಂದ ರಸ್ತೆ ದುರಸ್ಥಿಗೊಳಿಸಿ, ಸಾರ್ವಜನಿಕರಿಗೆ ನೆರವಾಗಿದ್ದಾರೆ. ಇವರ ಜನಪರ ಕಾಳಜಿ ಎಲ್ಲರಿಗೂ ಮಾದರಿ ಎಂದು ಹೆಗಡೆ ಗೆಳೆಯರ ಬಳಗದ ಪ್ರಮುಖ ಅಮರನಾಥ ಭಟ್ಟ ಸಂತಸ ವ್ಯಕ್ತಪಡಿಸಿದರು.

1kumata3photo1

ಕೋಟ್: ರಸ್ತೆ ದುರಸ್ಥಿ ಕಾರ್ಯ ಮಾಡಿಕೊಡುವಂತೆ ಜನರು ಬೇಡಿಕೆ ಸಲ್ಲಿಸಿದ ತಕ್ಷಣ ಕಾರ್ಯಪ್ರವೃತ್ತನಾಗಿ ಸ್ವಂತ ಹಣದಿಂದ ಕೆಲಸ ನಿರ್ವಹಿಸಿದ್ದೇನೆ. ಪ್ರಚಾರ ಪಡೆಯಲು ಈ ಕೆಲಸ ಮಾಡಿಲ್ಲ. ಬದಲಾಗಿ ನೂರಾರು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ರಸ್ತೆ ದುರಸ್ಥಿ ಮಾಡಲಾಗಿದೆ.
-ಗಣೇಶ ನಾಯ್ಕ ಹೆಗಡೆ, ಗುತ್ತಿಗೆದಾರ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Kumta News Tagged With: dirt on the road, Road at its own expense, to the notice of contractor Ganesh Naik, water in the rainy season poured down on the road, ಗುತ್ತಿಗೆದಾರ ಗಣೇಶ ನಾಯ್ಕ ಅವರ ಗಮನಕ್ಕೆ, ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು, ರಸ್ತೆಯ ಮಣ್ಣು ಕೊಚ್ಚಿ, ಸ್ವಂತ ಖರ್ಚಿನಲ್ಲಿ ರಸ್ತೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...