• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಟ್ಕಳದಲ್ಲಿ ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟದ ಎಚ್ಚರಿಕೆ: ರವೀಂದ್ರನಾಥ್ ನಾಯ್ಕ.

November 4, 2020 by bkl news Leave a Comment

ಭಟ್ಕಳ: ಅರಣ್ಯವಾಸಿಗಳ ಮಾನವ ಹಕ್ಕು ಉಲ್ಲಂಘನೆಯು ಇತ್ತೀಚಿನ ಅರಣ್ಯ ಸಿಬ್ಬಂದಿಗಳಿಂದ ಕಿರುಕುಳ, ದೌರ್ಜನ್ಯ, ಆತಂಕದಿಂದ ಆಗುತ್ತಿದ್ದು, ಇದರ ವಿರುದ್ಧ ಕಾನೂನಾತ್ಮಕ ಹೋರಾಟಮಾಡಲಾಗುವುದು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

IMG 20201103 WA0065


ಅರಣ್ಯ ಹಕ್ಕು ಕಾಯಿದೆಯು ಅರಣ್ಯವಾಸಿಗಳ ಪರವಾಗಿದ್ದು ಮಂಜೂರಿ ಪ್ರಕ್ರೀಯೆಯಲ್ಲಿ ಪದೇ ಪದೇಯಾಗಿ ಜಿಲ್ಲಾದ್ಯಂತ ಅರಣ್ಯವಾಸಿಗಳ ಸಾಗುವಳಿಗೆಗೆ ಮತ್ತು ಜೀವನಕ್ಕೆ ಆತಂಕ ಉಂಟುಮಾಡುವ ಅರಣ್ಯಸಿಬ್ಬಂದಿಗಳ ಕಾರ್ಯ ಕಾನೂನುಬಾಹಿರ ಕೃತ್ಯ ಇದನ್ನು ಹೋರಾಟಗಾರರ ವೇದಿಕೆಯು ಬಲವಾಗಿ ಖಂಡಿಸುತ್ತದೆ. ಪ್ರಬಲವಾದ ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಅರಣ್ಯ ಅತಿಕ್ರಮಣದಾರರು ಸಜ್ಜಾಗಬೇಕೆಂದು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ 85 ಸಾವಿರ ಅರಣ್ಯ ವಾಸಿಗಳ ಕುಟುಂಬವು ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯವು ಒಕ್ಕಲೆಬ್ಬಿಸಲು ಮಧ್ಯಂತರ ಆದೇಶ ನೀಡಿದ ಸಂದರ್ಭದಲ್ಲಿ 74 ಸಾವಿರ ಅತಿಕ್ರಮಣದಾರರ ಅರ್ಜಿ ತೀರಸ್ಕಾರವಾಗಿದ್ದು ಇಂತಹ ಅರಣ್ಯವಾಸಿಗಳಿಗೆ ಹಕ್ಕಿಗಾಗಿ ಸರಕಾರವು ಸಕರಾತ್ಮಕ ನಿರ್ಣಯ ತೆಗೆದುಕೊಳ್ಳುವುದು ಅನಿವಾರ್ಯ. ಇಲ್ಲದಿದ್ದಲ್ಲಿ ಜಿಲ್ಲೆಯ ಅರಣ್ಯವಾಸಿ ಕುಟುಂಬವು ಅತಂತ್ರವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ, ಕಯೀಂ ಸಾಬ, ರಿಜವಾನ್, ನಾರಾಯಣ ಕೃಷ್ಣ ನಾಯ್ಕ ಹಾಡುವಳ್ಳಿ, ಸಬೀರ್, ದತ್ತ ನಾಯ್ಕ ಹಸರವಳ್ಳಿ, ಶಂಕರ ನಾಯ್ಕ ಹಸರವಳ್ಳಿ, ಮಂಜುನಾಥ ದುರ್ಗಪ್ಪ ನಾಯ್ಕ ಹಲ್ಯಾಣಿ, ಅಣ್ಣಪ್ಪ ನಾರಾಯಣ ನಾಯ್ಕ ಹಿರೇಬಿಳೂರ ಮುಂತಾದವರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: Concern, Forest Invaders to Be Prepared, Forestry Farmers, Forests, HARASSMENT, Illegal Action, Legal Struggle, Livelihoods, Repeat Petitioners, Violence, ಅತಿಕ್ರಮಣದಾರರ ಅರ್ಜಿ ತೀರಸ್ಕಾರ, ಅರಣ್ಯ ಅತಿಕ್ರಮಣದಾರರು ಸಜ್ಜಾಗಬೇಕೆಂದು, ಅರಣ್ಯ ಭೂಮಿ ಹಕ್ಕು, ಅರಣ್ಯವಾಸಿಗಳ ಸಾಗುವಳಿ, ಅರಣ್ಯವಾಸಿಗಳ ಸಾಗುವಳಿಗೆಗೆ, ಅರಣ್ಯಸಿಬ್ಬಂದಿಗಳ, ಆತಂಕದಿಂದ, ಕಾನೂನಾತ್ಮಕ ಹೋರಾಟಕ್ಕೆ, ಕಾರ್ಯ ಕಾನೂನುಬಾಹಿರ ಕೃತ್ಯ, ಕಿರುಕುಳ, ಜೀವನಕ್ಕೆ ಆತಂಕ, ದೌರ್ಜನ್ಯ, ಮಂಜೂರಿ ಪ್ರಕ್ರೀಯೆಯಲ್ಲಿ ಪದೇ ಪದೇಯಾಗಿ ಜಿಲ್ಲಾದ್ಯಂತ, ಹೋರಾಟಗಾರರ ವೇದಿಕೆ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...