ವ್ಯಕ್ತಿಯೋರ್ವ ಅಡಿಕೆ ಅಟ್ಟದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಲಾಲಗುಳಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಭಾಸ್ಕರ ನಾರಾಯಣ ಗಾಂವ್ಕಾರ(35) ಎಂದು ಗುರುತಿಸಲಾಗಿದೆ. ಈತ ಅಡಿಕೆ ಅಡ್ಡದ ಮೇಲೆ ಹತ್ತಿ ದಬ್ಬೆಯನ್ನು ಸರಿಪಡಿಸುತ್ತಿರುವಾಗ ಪಕ್ಕದಲ್ಲಿ ಹಾದು ಹೋಗಿದ್ದ ಐಬೆಕ್ಸ್ ವಾಯರ್ ತಾಗಿ ಅಟ್ಟದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment