• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಭಾರತದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ: ಪರೀಕ್ಷೆಗಳ ಸಂಖ್ಯೆ 13.5 ಕೋಟಿಯತ್ತ

November 25, 2020 by Sachin Hegde Leave a Comment

ಪರೀಕ್ಷಾ ಹೆಚ್ಚಳದಿಂದ ಪಾಸಿಟಿವಿಟಿ ನಿರಂತರ ಇಳಿಕೆ

ಭಾರತದಲ್ಲಿ 2020ರ ಜನವರಿಯಿಂದೀಚೆಗೆ ಕೋವಿಡ್-19 ಸೋಂಕು ಪರೀಕ್ಷಾ ಮೂಲಸೌಕರ್ಯ ಗಣನೀಯ ಏರಿಕೆಯಾಗುತ್ತಿರುವ ಪರಿಣಾಮ, ಪರೀಕ್ಷೆಗಳ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,59,032 ಸೋಂಕು ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಒಟ್ಟು ಪರೀಕ್ಷೆಗಳ ಪ್ರಮಾಣ 13.5 ಕೋಟಿ ಸನಿಹಕ್ಕೆ (13,48,41,307) ತಲುಪಿದೆ.
ಸಮಗ್ರ ಮತ್ತು ವ್ಯಾಪಕ ಪರೀಕ್ಷೆಗಳನ್ನು ಸುಸ್ಥಿರ ಆಧಾರದಲ್ಲಿ ನಡೆಸುತ್ತಿರುವ ಕಾರಣ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ಒಟ್ಟು ಪಾಸಿಟಿವಿಟಿ ದರ ಕ್ರಮೇಣ ಇಳಿಕೆಯಾಗುತ್ತಿದೆ ಮತ್ತು ಅದು ಇಂದು ಶೇ.6.84 ತಲುಪಿದೆ.

ನಿರಂತರವಾಗಿ ಒಟ್ಟು ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ದೇಶದಲ್ಲಿ ಪರೀಕ್ಷಾ ಸೌಕರ್ಯವನ್ನು ವ್ಯಾಪಕವಾಗಿ ವೃದ್ಧಿಸಿರುವುಕ್ಕೆ ನಿದರ್ಶನವಾಗಿದೆ.

ಪ್ರತಿದಿನದ ಪಾಸಿಟಿವಿಟಿ ದರ ಇಂದು ಶೇ.3.83ಕ್ಕೆ ತಲುಪಿದೆ.

ಸುಸ್ಥಿರ ರೀತಿಯಲ್ಲಿ ಮತ್ತು ಪ್ರಗತಿದಾಯಕವಾಗಿ ಕೋವಿಡ್ ಪರೀಕ್ಷಾ ಮೂಲಸೌಕರ್ಯ ವೃದ್ಧಿ ಪರೀಕ್ಷೆಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳದಲ್ಲಿ ಮಹತ್ವದ ಪಾತ್ರ ವಹಿಸಿದೆ. ದೇಶದಲ್ಲಿ ಒಟ್ಟು 2,138 ಪರೀಕ್ಷಾ ಪ್ರಯೋಗಾಲಯಗಳಿದ್ದು, ಅವುಗಳಲ್ಲಿ 1167 ಸರ್ಕಾರಿ ಪ್ರಯೋಗಾಲಯಗಳು ಮತ್ತು 971 ಖಾಸಗಿ ಪ್ರಯೋಗಾಲಯಗಳು ಸೇರಿದ್ದು, ಅವುಗಳಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಉತ್ತೇಜಿಸಲಾಗಿದೆ.
ಅದರ ಪರಿಣಾಮ, ಪ್ರತಿ ಮಿಲಿಯನ್ ಜನಸಂಖ್ಯೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ ಒ) ನಿಗದಿಪಡಿಸಿರುವುದಕ್ಕಿಂತ ಐದು ಪಟ್ಟು ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ (4,44,746), ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಶೇ.4.82ರಷ್ಟು ಇದೆ ಮತ್ತು ನಿರಂತರವಾಗಿ ಆ ಪ್ರಮಾಣ ಶೇ.5ಕ್ಕಿಂತ ಕಡಿಮೆ ಇದೆ.
ಚೇತರಿಕೆ ಪ್ರಮಾಣ ಶೇ.93ಕ್ಕೂ ಅಧಿಕ ಮುಂದುವರಿದಿದೆ, ಸದ್ಯ ಅದು ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಶೇ.93.72ರಷ್ಟಿದೆ. ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ ಹೊಸದಾಗಿ 37,816 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 86,42,771ಕ್ಕೆ ಏರಿಕೆಯಾಗಿದೆ.
ಗುಣಮುಖವಾಗುತ್ತಿರುವ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ ಮತ್ತು ಸದ್ಯ ಅದು 81,98,025ರಷ್ಟಿದೆ.
ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.77.53ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.
ಕೇರಳದಲ್ಲಿ ಹೊಸದಾಗಿ ಒಟ್ಟು 5,149 ಸೋಂಕಿತರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ 4,943 ಸೋಂಕಿತರು ಗುಣಮುಖರಾಗಿದ್ದರೆ, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 4,086 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 44,376 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಹೊಸ ಪ್ರಕರಣಗಳಲ್ಲಿ ಶೇ.76.51ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ ಸಂಬಂಧಿಸಿದವು. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 6,224 ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ  5,439 ಹೊಸ ಪ್ರಕರಣಗಳು ಮತ್ತು ಕೇರಳದಲ್ಲಿ 5,420 ಪ್ರಕರಣಗಳು ನಿನ್ನೆ ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 481 ಸೋಂಕಿತರು ಮೃತಪಟ್ಟಿದ್ದು, ಆ ಪೈಕಿ ಶೇ.74.22ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ದೆಹಲಿಯಲ್ಲಿ ಅಧಿಕ ಸಂಖ್ಯೆಯ ಸೋಂಕಿತರ ಸಾವು 109 ಸಂಭವಿಸಿವೆ. ಪಶ್ಚಿಮ ಬಂಗಾಳದಲ್ಲಿ 49 ಮತ್ತು ಆನಂತರ ಉತ್ತರ ಪ್ರದೇಶದಲ್ಲಿ 33 ಸೋಂಕಿತರು ಸಾವನಪ್ಪಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News Tagged With: Case in point, Increase in Covid test, Infected dead, State of Delhi, Tests, Union Territory, ಕೇಂದ್ರಾಡಳಿತ ಪ್ರದೇಶ, ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ, ದೆಹಲಿಯಲ್ಲಿ ಅಧಿಕ ಸಂಖ್ಯೆ, ಪರೀಕ್ಷೆಗಳ ಪ್ರಮಾಣ, ಪ್ರಕರಣ ಹತ್ತು ರಾಜ್ಯ, ಸೋಂಕಿತರ ಸಾವು, ಸೋಂಕಿತರು ಮೃತ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 919,930 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಬೆಳ್ಳಕ್ಕಿ ಬೆಡಗು

January 21, 2021 By Lakshmikant Gowda

ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರ ನಡುವೆ ಸಂಪನ್ನಗೊಂಡ: ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ

January 21, 2021 By bkl news

“ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ

January 20, 2021 By Lakshmikant Gowda

ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ

January 19, 2021 By bkl news

ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ

January 19, 2021 By Vishwanath Shetty

ದತ್ತಾತ್ರೇಯ ನಾರಾಯಣ ಭಟ್ಟ ನಿದನ

January 18, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.