ಭಟ್ಕಳ: ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಕೃಷಿಕನೊರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೃಷಿಕ ಅಣ್ಣಪ್ಪ ಚನ್ನಾ ನಾಯ್ಕ(33) ಎಂದು ತಿಳಿದು ಬಂದಿದೆ. ಈತ ತನ್ನ ತಂದೆಯ ಅನಾರೋಗ್ಯ ಹಾಗೂ ತಮ್ಮನ ಶಸ್ತ್ರಚಿಕಿತ್ಸೆಗೆಂದು ಅಧಿಕ ಸಾಲ ಮಾಡಿದ್ದು. ಸಾಲ ಮರಳಿ ತೀರಿಸಲಾಗದೆ ಮನನೊಂದಿದ್ದು. ನಿನ್ನೆ ಸಂಬಂದಿಕರೋರ್ವರ ನಿಶ್ಚಿತಾರ್ಥ ಮುಗಿಸಿ ಹೋದವನು ಮನೆಗೆ ಬರದೆ ಇದ್ದವನು ರಾತ್ರಿ ತನ್ನ ಗ್ಯಾರೇಜನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ .ಈ ಸಾವಿನಿಂದಾಗಿ ಇಂದು ನಡೆಯ ಬೇಕಾದ ಸಂಬಂಧಿಕರ ಮದುವೆ ನಿಂತು ಹೋಗಿದ್ದು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment