ಭಟ್ಕಳ: ಭಟ್ಕಳ ಸ್ಪೋಟ್ರ್ಸ ಆಶ್ರಯದಲ್ಲಿ ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾದ 14, 16, 19 ವರ್ಷ ವಯೋಮಿತಿಯೊಳಗಿನ 3 ವಿವಿಧ ವಿಭಾಗಗಳ ಜ್ಯೂನಿಯರ್ ಕ್ರಿಕೆಟ್ ಪಂದ್ಯಾವಳಿಗೆ ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಯಾವುದೇ ದೊಡ್ಡ ಆಟಗಾರನೇ ಆಗಿರಲಿ ಇಂತಹ ಗ್ರಾಮೀಣ ಮಟ್ಟದ ಕ್ರೀಡಾಂಗಣದಿಂದಲೇ ಬಂದವರಾಗಿರುತ್ತಾರೆ. ಸತತ ಪ್ರಯತ್ನ ಯಶಸ್ಸಿಗೆ ಮುಖ್ಯವಾಗಿದೆ ಎಂದರು.
ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಜೀಜ್ ಉರ್ರೆಹೆಮಾನ್ ನದ್ವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅನಿವಾಸಿ ಉದ್ಯಮಿ ಕಮರ್ ಸಾದಾ, ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ ಕಾರ್ಯದರ್ಶಿ ಉಮೈರ್ ರುಕ್ನುದ್ದೀನ್, ಸಂಘದ ಕ್ರೀಡಾ ಕಾರ್ಯದರ್ಶಿ ಮಹ್ಮದ್ ತಲ್ಹಾ, ವ್ಯವಸ್ಥಾಪಕ ನಿರ್ದೇಶಕ ವಾಸೀಮ್ ಕೆ.ಎಮ್., ಸಫಾ ಕೆ.ಎಮ್., ಕ್ರಿಕೆಟ್ ತರಬೇತುದಾರ ಇಬ್ರಾಹಿಂ, ಇಮ್ತಿಯಾಜ್ ಉದ್ಯಾವರ, ನಸೀಫ್ ಖಲೀಫಾ ಉಪಸ್ಥಿತರಿದ್ದರು.
ಮುಬಾಶೀರ್ ಹಲ್ಲಾರೆ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಅಮೀನ್ ಜುಹೇಬ್ ಕುರಾನ್ ಪಠಿಸಿದರು.
Leave a Comment