ಪ್ರಧಾನಮಂತ್ರಿ ಅವರು ಆತ್ಮನಿರ್ಭರ ಭಾರತ ಅಭಿಯಾನ ಸಂಕಷ್ಟ ಪ್ಯಾಕೇಜ್ ಅಡಿಯಲ್ಲಿ 15,000 ಕೋಟಿ ರೂ.ಗಳ ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಪ್ರಕಟಿಸಿದ್ದರು. ರೈತ ಉತ್ಪನ್ನ ಸಂಸ್ಥೆಗಳು(ಎಫ್ ಪಿ ಒ)ಗಳು, ಎಂಎಸ್ಎಂಇ, ಖಾಸಗಿ ಕಂಪನಿಗಳು, ವೈಯಕ್ತಿಕ ಹೂಡಿಕೆದಾರರು, ಹೂಡಿಕೆಗಳನ್ನು ಮಾಡಲು ನೆರವು ನೀಡುವುದು ಇದರ ಉದ್ದೇಶವಾಗಿದೆ ಮತ್ತು ಸೆಕ್ಷನ್ 8ರ ಪ್ರಕಾರ ಈ ಕೆಳಗಿನವುಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ. (i) ಹಾಲು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ, (ii) ಮಾಂಸ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ ಮತ್ತು (iii) ಪಶು ಆಹಾರ ಘಟಕ. ಈ ಎಲ್ಲಾ ಅರ್ಹ ಸಂಸ್ಥೆಗಳಿಗೆ ಶೇ.3ರ ಬಡ್ಡಿ ವಿನಾಯಿತಿಯನ್ನು ನೀಡಲಾಗುವುದು. ಈವರೆಗೆ ಎಎಚ್ಐಡಿಎಫ್ ಅಡಿಯಲ್ಲಿ ಬ್ಯಾಂಕುಗಳು 150 ಕೋಟಿ ರೂ.ಗಳ ಯೋಜನೆಗೆ ಸಾಲವನ್ನು ಅನುಮೋದಿಸಿದೆ. ಅರ್ಹ ಸಂಸ್ಥೆಗಳು ಆನ್ ಲೈನ್ ಮೂಲಕ https://ahidf.udyamimitra.in ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
Leave a Comment