ಭಟ್ಕಳ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೌಫ್ ಶರೀಫ್ ರನ್ನು ತಿರುವನಂತಪುರಂ ವಿಮಾನ ನಿಲ್ದಾಣದಿಂದ ಈ ಡಿ
ಅಧಿಕಾರಿಗಳುಬಂಧಿಸಿರುವ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಭಟ್ಕಳ ಘಟಕ ಖಂಡಿಸಿದೆ.’ಸಂಘ ಪರಿವಾರದ ವಿರುದ್ಧ ಧ್ವನಿ ಎತ್ತುವವರನ್ನು ಮತ್ತು ರಾಜಕೀಯ ವಿರೋಧಿಗಳನ್ನು ಬೇಟೆಯಾಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಇಡಿಯನ್ನು ದುರುಪಯೋಗ ಪಡಿಸುತ್ತಿದೆ . ಸರ್ಕಾರಿ ಸಂಸ್ಥೆಗಳು ಸಂಘ ಪರಿವಾರದ ದಾಳಗಳಾಗದಂತೆ ತಡೆಯುವ ಜವಾಬ್ದಾರಿ ಪ್ರಜಾಪ್ರಭುತ್ವವಾದಿಗಳಿಗಿದೆ. ಸಿಎಎ-ಎನ್ಆರ್ಸಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಕ್ಯಾಂಪಸ್ ಫ್ರಂಟ್ ನಾಯಕರನ್ನು ಬೇಟೆಯಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದೆ.ರೌವೂಫ್ ಅವರ ಬಂಧನದ ನಂತರ ಅವರ ಮನೆಗೆ ನಡೆಸಿದ ದಾಳಿಯಲ್ಲಿ ಏನೂ ಸಿಗಲಿಲ್ಲ ಎಂದು ಹೇಳಿದ ಈಡಿ ಅಧಿಕಾರಿಗಳು ವರದಿಯಲ್ಲಿ ನಿಲ್ ಎಂದು ಬರೆದಿರವುದು ಸಾಕ್ಷಿಯಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಸಿಎಎ-ಎನ್ಆರ್ಸಿ ಅನುಷ್ಠಾನಕ್ಕೆ ಮುನ್ನ ಸಂಘ ಪರಿವಾರವನ್ನು ವಿರೋಧಿಸುತ್ತಿರುವ ನಾಯಕರು ಮತ್ತು ಚಳುವಳಿಗಳನ್ನು ಬೆದರಿಸುವುದು ಬಿಜೆಪಿಯ ಹೆಜ್ಜೆಯಾಗಿದೆ. ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿಯು ರೌಫ್ ಶರೀಫ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಪ್ರತಿಭಟನೆಯ ಮೂಲಕ ಆಗ್ರಹಿಸಿದೆ.ದ್ವೇಷದ ರಾಜಕಾರಣದ ವಿರುದ್ಧದ ಪ್ರತಿಭಟನೆಯಿಂದ ವಿದ್ಯಾರ್ಥಿಗಳು ಹಿಂದೆ ಸರಿಯುತ್ತಾರೆ ಎಂಬುದುಆರ್ ಎಸ್ ಎಸ್ ನ ಹಗಲುಗನಸಾಗಿದೆ ಎಂದು ಕ್ಯಾಂಪಸ್ ಪ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರು ಹೇಳಿದ್ದಾರೆ.ಅಧ್ಯಕ್ಷರಾದ ಇರ್ಪಾನ್, ಕಾರ್ಯದರ್ಶಿ ರಜಾಕ್, ಸಮಿತಿ ಸದಸ್ಯ ಅಯ್ಯಾನ್ ಇತರರು ಇದ್ದರು.
Leave a Comment