ಭಟ್ಕಳ: ಪಕ್ಕದ ಮನೆಯಲ್ಲಿ ಹತ್ಯೆಯಾದ ಮಹಿಳೆಯ ಶವ ನೋಡಿ ವ್ಯಕ್ತಿಯೊರ್ವವರು ಗಾಬರಿಗೊಂಡು ಅಲ್ಲೆ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯ ಮೃತ ಪಟ್ಟ ಘಟನೆ ತಾಲೂಕಿನ ಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕೊಂಕಣಾತಿ ಭೈಲನಲ್ಲಿ ಭಾನುವಾರ ನಡೆದಿದೆ.
ಶಿರಾಲಿ ಪಂಚಾಯಿತಿಯ ಚಿತ್ರಾಪುರದ ನಿವಾಸಿ ಗಜಾನನ ಉಲ್ಲಾಸ ಮಾಂಜ್ರೆಕರ(೪೩) ಮೃತ ವ್ಯಕ್ತಿ. ಇವರು ಶನಿವಾರ ಕೊಪ್ಪದ ಕೊಂಕಣಾತಿಬೈಲನಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು. ಅಲ್ಲಿ ಪಕ್ಕದ ಮನೆಯಲ್ಲಿ ಶಬ್ದ ಬಂದಿದ್ದು ಅದನ್ನು ನೋಡಲು ಹೋಗಿದ್ದಾರೆ. ಅಲ್ಲಿ ಗಾಯಗೊಂಡ ಲಕ್ಷಿö್ಮ ನಾಯ್ಕ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿರುವದನ್ನು ನೋಡಿ ಗಾಬರಿಗೊಂಡಿದ್ದಾರೆ. ಅದನ್ನು ನೋಡಿ ಗಾಬರಿಗೊಂಡು ತೆರಳುವಾಗ ದಾರಿಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಮುರ್ಡೇಶ್ವರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಮೃತಪಟ್ಟಿರುವದನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದರು. ಮೃತರ ಬಲಕೆನ್ನೆಯ ಭಾಗ ಉಬ್ಬಿದ್ದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮೃತರ ಸಹೋದರ ಉಲ್ಲಾಸ ಮಾಂಜ್ರೆಕರ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.
Leave a Comment