ಭಟ್ಕಳ: ವರದಕ್ಷಿಣೆ ಹಣ ತರುವಂತೆ ಪೀಡಿಸಿ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಸರ್ಪನಕಟ್ಟೆಯ ಯಲ್ವಡಿಕವೂರ ನಿವಾಸಿ ದಿವ್ಯಾ ನಾಯ್ಕ ದೂರು ನೀಡಿದ ಮಹಿಳೆ. ಇವರು ಉಡುಪಿಯ ಕಾಪುವಿನ ನಿವಾಸಿ ಅಶ್ವೀನ ಅಮೀನ ಕಾಂತರಾಜು,
ನಳಿನಾಕ್ಷಿ ಕಾಂತರಾಜು ಇವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಉಡುಪಿಯ ಖಾಸಗಿ ಹಾಲ್ನಲ್ಲಿ ತನ್ನ ಮದುವೆ ಅಕ್ಟೋಬರ ೨೯ರಂದು ಮದುವೆ ನಡೆದಿತ್ತು. ಆ ಸಂದರ್ಬದಲ್ಲಿ ವರದಕ್ಷಿಣೆಯಾಗಿ ೫೦ ಪವನ್ ಚಿನ್ನ ಕೇಳಿದ್ದರು. ತನ್ನ ಅಣ್ಣ ರವಿ ನಾಯ್ಕ ೩೦ ಪವನ್ ಚಿನ್ನ ನೀಡಿ ಮದುವೆಯ ೧೦ ಲಕ್ಷ ರೂ ಖರ್ಚನ್ನು ಭರಿಸಿದ್ದರು. ಕೊಟ್ಟ ಮಾತಿನಂತೆ ಚಿನ್ನ ನೀಡಲಿಲ್ಲ ಎಂದು ಮದುವೆಯಾದ ೨ನೇ ದಿನಕ್ಕೆ ನಿಂದನೆ ಮಾಡಲು ಆರಂಭಿಸಿದ್ದರು. ನಂತರ ೧೦ ಲಕ್ಷ ರೂ ತರುವಂತೆ ಒತ್ತಾಯಿಸಿದ್ದರು. ಪಡುಬಿದ್ರೆಯ ಕೋರ್ಟ ಯಾರ್ಡ ನಿವಾಸಿ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಇವರ ಸಾಮಾಜಿಕ ಜಾಲತಾಣದ ಸಂದೇಶಗಳನ್ನು ಪತಿಗೆ ತೋರಿಸಿ ಈ ಕುರಿತು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ತನ್ನ ಮೊಬೈಲ್ ಫೋನ್ ಅನ್ನು ನೆಲಕ್ಕೆ ಬಡಿದು ಹಾಳು ಮಾಡಿದ್ದಾರೆ. ಅಲ್ಲದೆ ನಳಿನಾಕ್ಷಿ ಕಾಂತರಾಜು ಇವರು ಜೀವ ಬೆದರಿಕೆ ಹಾಕಿದ್ದಾರೆ. ನ.೨೫ರಂದು ಉಡುಪಿಯ ಕಾಪುವಿನಲ್ಲಿ ಅಂಗಡಿಯೊದರಲ್ಲಿ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿ, ಡಿ ೧೯ರಂದು ಹಣ ತರುವಂತೆ ಪೀಡಿಸಿ ಮನೆಯಿಂದ ಹೊರ ಹಾಕಿದ್ದರು. ನಂತರ ಫೋನ್ ಪೆ ಮತ್ತು ಗೂಗಲ್ ಪೆ ಗಳಿಂದ ಕ್ರಮವಾಗಿ ೧.೫೦ಲಕ್ಷ ಹಣವನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಜ.೧೫ ರಂದು ಸಂತ್ರಸ್ಥೆಯ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮೀಣ ಠಾಣೆಯಲ್ಲಿ ಸಂತ್ರಸ್ಥೆ ಮಹಿಳೆ ದೂರು ದಾಖಲಸಿದ್ದಾರೆ
Leave a Comment