ಹಳಿಯಾಳ:- ಕಳೆದ ಎರಡು ದಿನಗಳಿಂದ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದ ಪಿಶೆಲಿಂಗೇಶ್ವರ ಜಾತ್ರಾ ಮಹೋತ್ಸವು ಸಂಪನ್ನಗೊಂಡಿದೆ.
ಅದ್ದೂರಿಯಾಗಿ ನಡೆಯುತ್ತಿದ್ದ ಈ ಜಾತ್ರಾ ಮಹೋತ್ಸವವವು ಈ ಬಾರಿ ಕೊರೊನಾ ಹಿನ್ನೆಲೆ ಅತ್ಯಂತ ಸರಳವಾಗಿ ನಡೆಸಲಾಯಿತು. ಇಂದು ಪಿಶೇಲಿಂಗೇಶ್ವರ ದೇವರು ಹಾಗೂ ಗ್ರಾಮದೇವತೆಯಾದ ಶ್ರೀಲಕ್ಷ್ಮೀ ದೇವಿಯ ಉಡಿತುಂಬುವ ಕಾರ್ಯಕ್ರಮ ನಡೆಯಿತು.
ಸೋಮವಾರ ಶ್ರೀ ಪಿಶೆಲಿಂಗೇಶ್ವರ ಪ್ರಾಣ ಪ್ರತಿμÁ್ಠಪನೆ, ಹವನ ಹಾಗೂ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳೊಂದಿಗೆ ನಡೆದವು. ಮಧ್ಯಾಹ್ನ ಗ್ರಾಮದ ಸರಪಂಚರು ಶ್ರೀ ಲಕ್ಷ್ಮಿ ದೇವಿಯ ಉಡಿ ತುಂಬಿದ ನಂತರ ಭಕ್ತರು ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಭಕ್ತರಿಂದ ಭಂಡಾರ ಎರಚುತ್ತಾ ಡೊಳ್ಳು ವಾದನಗಳು, ದೇವರ ನಾಮಸ್ಮರಣೆ, ಭಜನೆಗಳು ಗಮನ ಸೆಳೆದವು.
Leave a Comment