ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಕಿಜಾರ್ ಮಸೀದಿ ಹತ್ತಿರ ಶರಾವತಿ ನದಿ ತೀರದ ಬಳಿ ಶುಕ್ರವಾರ ರಾತ್ರಿ ಗಾಂಜಾ ಮಾರುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಭಟ್ಕಳ ತಾಲೂಕಿನ ಮದೀನಾ ಕಾಲೋನಿಯ 26 ವರ್ಷದ ಅಬ್ರಾರ್ ಇಬ್ರಾಹಿಂ ಶೇಖ್, ಕಾಸರಕೋಡ ಟೋಂಕಾ ಕ್ರಾಸ ನಿವಾಸಿ 23 ವರ್ಷದ ಸಮೀರ ಮಹಮ್ಮದ್ ಅಲಿ ಪಂಡಿತ ಬಂಧಿತ ಆರೋಪಿಗಳು. ಕಾಸರಕೋಡ ಟೋಂಕಾ ಕಿಜಾರ್ ಮಸಿದಿ ಹತ್ತಿರದ ನಿವಾಸಿ ಮಹಮದ್ ಸಲಾಂ ಇಸ್ಮಾಯಿಲ್ ಮೂಸಾ ಪರಾರಿಯಾದ ಆರೋಪಿ. ಬಂಧಿತರಿಂದ ಒಟ್ಟು 500 ಗ್ರಾಂ ತೂಕದ ಸುಮಾರು 10,000/- ರೂಪಾಯಿ ಮೌಲ್ಯದ 30 ಗಾಂಜಾ ಮಾದಕ ವಸ್ತು ಇರುವ ಪ್ಯಾಕೆಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಇವರು ತಮ್ಮ ಬಳಿ ಇಟ್ಟುಕೊಂಡಿದ್ದರು. ಪೊಲೀಸರು 30 ಗಾಂಜಾ ಪ್ಯಾಕೆಟ್ಗಳು, ಒಂದು ತಕ್ಕಡಿ, ಗಾಂಜಾ ಸಾಗಾಟಕ್ಕೆ ಬಳಸಿದ ನೋಂದಣಿ ಸಂಖ್ಯೆ ಇರದ ಸುಮಾರು 25 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಲ್ಲಿ ಪ್ರಕರಣ ದಾಖಲಾಗಿದೆ.,
Leave a Comment