ಭಟ್ಕಳ: ತಾಲೂಕಿನ ವಿವಿದೆಡೆ ಓಸಿ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳನ್ನು ತಾಲೂಕಿನ ಜಾಲಿಯ ನಾಗೇಶ ರಾಮಾ ನಾಯ್ಕ (50), ಹನುಮಾನ ನಗರದ ಲೋಕೇಶ ಗಣಪತಿ ನಾಯ್ಕ (29), ಮಣ್ಕುಳಿಯ ಸಂಜಯ ತಂದೆ ಮಂಜುನಾಥ ನಾಯ್ಕ (20), ರವಿ ಅನಂತ ನಾಯ್ಕ (34) ತಲಾಂದ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಟ್ಟೂ ರು.9850ನ್ನು ಜಫ್ತುಪಡಿಸಿಕೊಳ್ಳಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Leave a Comment