• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತೊಳಸಾಣಿಯಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಗ್ರಾಮವಾಸ್ತವ್ಯ

February 21, 2021 by Vishwanath Shetty Leave a Comment

ಹೊನ್ನಾವರ –ತಾಲೂಕಿನ ಕುಗ್ರಾಮವಾದ ತೊಳಸಾಣಿಯಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಳ್ಳಿಬೇಟಿ ಹಾಗೂ ಗ್ರಾಮ ವಾಸ್ತವ್ಯ ನಡೆಯಿತು.
ಸರ್ಕಾರಿ ಸವಲತ್ತುಗಳನ್ನು ಪಡೆಯಲು ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಛೇರಿಗೆ ಅಲೆದು ಬೇಸತ್ತಿದ್ದ ಗ್ರಾಮಸ್ಥರು ಇಂದು ತಮ್ಮ ಬಳಿಗೇ ಬಂದ ಅಧಿಕಾರಿಗಳೆದುರು ಒಂದೇ ಉಸುರಿಗೆ ಸಾಲು ಸಾಲು ಬೇಡಿಕೆಗಳ ಪಟ್ಟಿಯನ್ನಿಟ್ಟು ಈಡೇರಿಸುವಂತೆ ಮನವಿ ಮಾಡಿದರು.

gramavastavya


ಮುಖ್ಯವಾಗಿ ಮೊಬೈಲ್ ನೆಟ್ವರ್ಕ, ಪಡಿತರ ವಿತರಣಾ ಕೇಂದ್ರ, ರಂಗಮಂದಿರ, ಅರಣ್ಯ ಅತಿಕ್ರಮಣದಾರರ ತೊಂದರೆ, ರಸ್ತೆ ಸಮಸ್ಯೆ, ಮಂಗನ ಖಾಯಿಲೆ ಸಹಿತ ಕಾಡು ಹಾಗೂ ನಾಡು ಬೆರೆತಂತಿರುವ ಕುಗ್ರಾಮದಲ್ಲಿ ಕಾಡುತ್ತಿರುವ ನೂರಾರು ಸಮಸ್ಯೆಗಳನ್ನು ಪಟ್ಟಿಮಾಡಿದರು. ಗ್ರಾಮಸ್ಥರ ಅಹವಾಲನ್ನು ಸಾವಧಾನದಿಂದ ಆಲಿಸಿದ ತಹಶಿಲ್ದಾರ್ ಹಾಗೂ ಇತರೇ ಅಧಿಕಾರಿಗಳು ಸಾಧ್ಯವಿರುವುದನ್ನು ಮಾಡುವುದಾಗಿಯೂ ಉಳಿದವುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿಯೂ ತಿಳಿಸಿದರು.
ಪಡಿತರ ವಿತರಣಾ ಕೇಂದ್ರ
ತೊಳಸಾಣಿ, ಅಠಾರ, ದರ್ಬೆಜಡ್ಡಿ, ಕಾನಕ್ಕಿ, ಮೇಲಿನಕೇರಿ, ಕೆರೆಕೊಣ, ಕೆರೆಮನೆಕಚ್ಚರಿಕೆ, ಹಾಲ್ತೋಡ, ಬೋಳ್ಗೆರೆ, ತೊಲಾಕುಳಿ, ಉಗ್ರಾಣಿಮನೆ, ಅಡಿಮನೆ, ಬೆಣ್ಣೆಮನೆ, ಕಾಸನಬೇಣ, ಹೊಯ್ನೀರು ಮುಂತಾದ ಭಾಗದಲ್ಲಿ ಕೂಲಿಕಾರ್ಮಿಕರು, ದಲಿತರು ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಗುಡ್ಡಗಾಡು ಪ್ರದೇಶವಾಗಿರುವ ಜೊತೆಗೆ ಬೌಗೋಳಿಕವಾಗಿಯೂ ವಿಸ್ತಾರವಾಗಿದೆ ಅರೇಅಂಗಡಿಯಲ್ಲಿರುವ ಪಡಿತರ ವಿತರಣಾ ಕೇಂದ್ರ ಒಂದನ್ನೇ ಅವಲಂಬಿಸಿರುವುದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ. ಮೇಲಿನ ಮಜರೆಗಳಿಗೆ ಮಧ್ಯವರ್ತಿ ಸ್ಥಳದಲ್ಲಿ ಪಡಿತರ ವಿತರಣಾ ಕೇಂದ್ರ ತೆರೆಯುವಂತೆ ಗ್ರಾಮಸ್ಥರು ತಹಶಿಲ್ದಾರ್ ಅವರಲ್ಲಿ ಮನವಿ ಮಾಡಿದರು.

gramavastavya


ಉಪ ಆರೋಗ್ಯ ಕೇಂದ್ರದ ಬೇಡಿಕೆ
ತಾಲೂಕು ಕೇಂದ್ರದಿಂದ 20 ಕಿಲೋಮೀಟರ್ ದೂರದಲ್ಲಿರುವ ತೊಳಸಾಣಿಯಲ್ಲಿ ಯಾರಿಗೇ ಆರೋಗ್ಯ ಕೆಟ್ಟರೂ ಹಗಲಲ್ಲಾದರೆ 10 ಕಿಲೋಮೀಟರ್ ದೂರದಲ್ಲಿರುವ ಅರೇಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲವೇ ತಾಲೂಕಾ ಕೇಂದ್ರಕ್ಕೆ ಕರೆದೊಯ್ಯಬೇಕು. ಮೊಬೈಲ್ ನೆಟ್ವರ್ಕ ಸಿಗದ ದುಸ್ಥಿತಿಯಲ್ಲಿ ಯಾರನ್ನಾದರು ಸಂಪರ್ಕಿಸುವುದು ಕಷ್ಟ ಅದೆಷ್ಟೋ ಪ್ರಕರಣಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮೊಬೈಲ್ ನೆಟ್ವರ್ಕ ಹುಡುಕಿ ಅಂಬುಲೆನ್ಸ್‍ಗೆ ಕರೆಮಾಡಿ ಅವರು ಅಲ್ಲಿಂದ ಬಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ಹೆರಿಗೆಯಾದ ಉದಾಹರಣೆಯಿದೆ. ತೀವೃ ಆರೋಗ್ಯ ತೊಂದರೆಗೊಳಗಾದವರನ್ನಂತೂ ಜೀವ ಇರುವಾಗಲೇ ಆಸ್ಪತ್ರೆಗೆ ತಲುಪಿಸುವುದು ದುಸ್ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ತೊಳಸಾಣಿ ಭಾಗದಲ್ಲಿ ಕನಿಷ್ಠ ಆರೋಗ್ಯ ಉಪ ಕೇಂದ್ರವನ್ನಾದರೂ ತೆರೆದು ಕುಗ್ರಾಮದ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎನ್ನುವ ಒತ್ತಾಯ ಸಭೆಯಲ್ಲಿ ಕೇಳಿಬಂತು
ತಾಲೂಕಾ ಪಂಚಾಯತಗೆ ಒಂದುಕಡೆ ಜಿಲ್ಲಾಪಂಚಾಯತಗೆ ಇನ್ನೊಂದು ಕಡೆ ಮತ ಹಾಕುವ ಹಿರೇಬೈಲ್ ಗ್ರಾಮಸ್ಥರು
ಭಟ್ಕಳ ವಿಧಾನಸಭಾ ಕ್ಷೇತ್ರವ್ಯಾಪ್ತಿಗೊಳಪಡುವ ಚಿಕ್ಕನಕೋಡ ಪಂಚಾಯತಗೆ ಸೇರಿದ ಹಿರೇಬೈಲ್ ಗ್ರಾಮಪಂಚಾಯತ ಕಾರ್ಯಾಲಯದಿಂದ 22 ಕಿಲೋಮೀಟರ್ ದೂರದಲ್ಲಿದೆ. ಈ ಭಾಗದ ಜನರು ಜಿಲ್ಲಾಪಂಚಾಯತ ಚುನಾವಣೆಯಲ್ಲಿ ಮಾವಿನಕುರ್ವಾ ಜಿಲ್ಲಾಪಂಚಾಯತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿದರೆ ತಾಲೂಕಾ ಪಂಚಾಯತ ಚುನಾವಣೆಯಲ್ಲಿ ಮುಗ್ವಾ ಜಿಲ್ಲಾಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಡ್ಲೆ ತಾಲೂಕಾ ಪಂಚಾಯತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕುವ ಅನಿವಾರ್ಯತೆಯಿದೆ. ಈ ವಿರೋದಾಭಾಸ ಯಾಕೆ ಎಂದು ಗ್ರಾಮಸ್ಥರು ಬಿಚ್ಚಿಟ್ಟ ಸಮಸ್ಯೆಗೆ ಪ್ರತಿಕ್ರಿಯಿಸಿದ ತಹಶೀಲ್ದಾರ ವಿವೇಕ ಶೇಣ್ವಿ ಕ್ಷೇತ್ರ ವಿಂಗಡಣೆಮಾಡುವಾಗ ಸರಿಪಡಿಸಿಕೊಡುವುದಾಗಿ ತಿಳಿಸಿದರು.
ಹಳ್ಳಿ ಬೇಟಿ ಹಾಗೂ ಗ್ರಾಮ ವಾಸ್ತವ್ಯ ಸಭೆಯ ಅಧ್ಯಕ್ಷತೆಯನ್ನು ತಹಶಿಲ್ದಾರ ವಿವೇಕ ಶೇಣ್ವಿ ವಹಿಸಿದ್ದರು, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಕರೀಂ ಅಸದಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸಪ್ಪ ಹುಳಗೋಳ, ಕೃಷಿ ಅಧಿಕಾರಿ ಪುನಿತಾ ಬಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೇಶವಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ಸೂರ್ಯಕಾಂತ ಉಪಸ್ಥಿತರಿದ್ದರು. ಬಿ.ಆರ್.ಸಿ ಎಸ್.ಎಂ.ಹೆಗಡೆ, ಸಾಲ್ಕೋಡ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿ.ಎ.ಪಟಗಾರ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಯೋಗಾನಂದ ಸೇರಿದಂತೆ ವಿವಿಧ ಇಲಾಖೆಯ ಪ್ರಮುಖರು ಭಾಗಿಯಾಗಿದ್ದರು. ತಾಲೂಕಾ ಯುವಜನ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರ್ವಹಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: ಅರಣ್ಯ ಅತಿಕ್ರಮಣದಾರರ ತೊಂದರೆ, ಗ್ರಾಮ ವಾಸ್ತವ್ಯ, ಪಡಿತರ ವಿತರಣಾ ಕೇಂದ್ರ, ಮಂಗನ ಖಾಯಿಲೆ, ಮೊಬೈಲ್ ನೆಟ್ವರ್ಕ, ರಂಗಮಂದಿರ, ರಸ್ತೆ ಸಮಸ್ಯೆ, ಹಳ್ಳಿಬೇಟಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...