ಭಟ್ಕಳ: ಕಾಡು ಕೋಣ ಬೇಟೆಯಾಡಿ ಮಾಂಸವನ್ನು ಕಾರಿನಲ್ಲಿ ಸಾಗಾಟ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ತಾಲೂಕಿನ ಬದ್ರಿಯಾ ಕಾಲೋನಿಯಲ್ಲಿ ಕಾರನ್ನು ವಶ ಪಡಿಸಿಕೊಂಡ ಘಟನೆ ನಡೆದಿದೆ.
ಹೊನ್ನಾವರ ಕಡೆಯಿಂದ ಕಾರಿನಲ್ಲಿ ಕಾಡುಕೋಣದ ಮಾಂಸವನ್ನು ತುಂಬಿಕೊಂಡು ಭಟ್ಕಳದ ಕಡೆ ಬರುವ ವೇಳೆ ಖಚಿತ ಮಾಹಿತಿ ಪಡೆದು ಶಿರಾಲಿ ಚೆಕ್ ಪೋಸ್ಟ್ ನಲ್ಲಿ ನಾಕಾ ಬಂದಿ ಹಾಕಿದ್ದರು. ಕಾರು ಚಾಲಕ ಬ್ಯಾರಿಕೆರ್ ಒಡೆದು ತೆಂಗಿನಗುಂಡಿ ಮೂಲಕ ಬದ್ರಿಯಾ ಕಾಲೋನಿಯಲ್ಲಿ ಕಾರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದು. ಅರಣ್ಯಾಧಿಕಾರಿ ಕಾರನನ್ನು ವಶಪಡಿಸಿಕೊಂಡು ಕ್ರೇನ್ ಮುಖಾಂತರ ಕಾರನ್ನು ಅರಣ್ಯ ಇಲಾಖಾ ಕಛೇರಿಗೆ ತರಲಾಗಿದೆ. ಆರ್.ಎಫ್.ಓ ಸವಿತಾ ದೇವಾಡಿಗ ಇವರ ನೇತ್ರತ್ವದಲ್ಲಿ ಕಾರ್ಯಚರಣೆ ನಡೆದಿದೆ.
ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
Leave a Comment