ಭಟ್ಕಳ: ಮುರುಡೇಶ್ವರ ಬಸ್ತಿ ಕಾಯ್ಕಿಣಿಯಲ್ಲಿರುವ ಪಾಶ್ರ್ವನಾಥಸ್ವಾಮಿ ದಿಗಂಬರ ಜೈನಬಸದಿಯ ಹಿಂಬದಿಯ ನಾಗರಕಟ್ಟೆಯಲ್ಲಿದ್ದ 3 ನಾಗರಕಲ್ಲು, 1 ನಾಗಯಕ್ಷೆಯ ಕಲ್ಲನ್ನು ಕಿಡಿಗೇಡಿಯೊಬ್ಬ ಸಾರಾಯಿ ಅಮಲಿನಲ್ಲಿ ಕಿತ್ತೆಸೆದಿರುವುದಕ್ಕೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ಮಾರುತಿ ಬಾಕಡ್ ಎಂದು ಶಂಕಿಸಲಾಗಿದ್ದು, ಆರೋಪಿಯು ಚಪ್ಪಲಿಯನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
Leave a Comment