ತಾಲೂಕಿನ ಗುರುಕೃಪಾ ಸಹಕಾರಿ ಪತ್ತಿನ ಸಂಘದ ಆಡಳಿತ ಕಮೀಟಿಯ ಅಧ್ಯಕ್ಷರಾಗಿ ಮೋಹನ ನಾಯ್ಕ ಮಣ್ಕುಳಿ ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಸಣ್ತಮ್ಮಾ ನಾಯ್ಕ ಮಣ್ಕುಳಿ ಇವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕಿನ ಹೊಸ ಆಡಳಿತ ಕಮೀಟಿಯ ಸದಸ್ಯರ ಅಯ್ಕೆಗಾಗಿ ಫೆ.21ರಂದು ಚುಣಾವಣೆ ನಡೆದಿತ್ತು. ಮಂಗಳವಾರ ಬ್ಯಾಂಕಿನಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುಣಾವಣೆಯಲ್ಲಿ ಎರಡು ಹುದ್ದೆಗಳಿಗೆ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ಎಂದು ಘೋಷಿಸಿಲಾಯಿತು.
ಕುಮಟಾ ಸಹಾಯಕ ನಿಬಂಧಕ ಕಛೇರಿಯ ಸುಮನಾ ನಾಯ್ಕ ಚುಣಾವಣಾ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಸದಸ್ಯರಾದ ವೆಂಕಟೇಶ ನಾಯ್ಕ, ಹರೀಶ ನಾಯ್ಕ, ಶಬರೀಶ ನಾಯ್ಕ, ಸುರೇಶ ನಾಯ್ಕ, ಕುಮಾರ ನಾಯ್ಕ, ರಾಜೇಶ ನಾಯ್ಕ, ಸತೀಶ ನಾಯ್ಕ, ಸುರೇಶ ಮೊಗೇರ, ಜಯಂತ ಗೊಂಡ, ಭಾರತಿ ನಾಯ್ಕ, ವಿಜಯಾ ನಾಯ್ಕ ಹಾಗೂ ಕಾರ್ಯನಿರ್ವಾಹಣಾಧಿಕಾರಿ ವಾಸು ನಾಯ್ಕ ಇದ್ದರು.
Leave a Comment