ಹೊನ್ನಾವರ: ತಾಲೂಕಿನ ಚಿತ್ತಾರ ಗ್ರಾಮದ ಹಡಿಕಲ್ನಲ್ಲಿ 24 ಲಕ್ಷ ಮೊತ್ತದ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.

ಗ್ರಾಮದ ಹಲವು ಮನೆಗಳು ಪ್ರತಿವರ್ಷ ಮಳೆಗಾಲದಲ್ಲಿ ಜೀವದ ಹಂಗು ತೊರೆದು ಕಾಲುಸಂಕದ ಮೂಲಕ ಸಂಚಾರ ನಡೆಸುತ್ತಿದ್ದರು. ಹಲವು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ನೀಡಿದರು ಸಮಸ್ಯೆಗೆ ಪರಿಹಾರ ಕಂಡಿರಲಿಲ್ಲ.

ಶಾಸಕರಾದ ಬಳಿಕ ಗ್ರಾಮಸ್ಥರು ಕಿರು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಮುಂದಿಟ್ಟಿದ್ದರು. ಗ್ರಾಮಸ್ಥರ ಬೇಡಿಕೆಯಂತೆ 24 ಲಕ್ಷ ವೆಚ್ಚದಲ್ಲಿ ಕಿರು ಸೇತುವೆ ಮಂಜೂರು ಮಾಡಿಸಿಕೊಂಡು ಬಂದು ಶಂಕುಸ್ಥಾಪನೆಯನ್ನು ಸಾಸಕ ಸುನೀಲ ನಾಯ್ಕ ನೇರವೇರಿಸಿದರು. ಸೇತುವೆ ಕಾಮಗಾರಿ ಮಂಜೂರಾಗಿರುದಕ್ಕೆ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಗಣಪತಿ ಗೌಡ ಚಿತ್ತಾರ, ಗಣಪತಿ ನಾಯ್ಕ ಬಿಟಿ, ಶ್ರೀಧರ ನಾಯ್ಕ, ಸುಬ್ರಾಯ ನಾಯ್ಕ, ಪಿಡಬ್ಲ್ ಡಿ ಅಧಿಕಾರಿ ಯೋಗನಾಂದ ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು.
Leave a Comment