ಭಟ್ಕಳ: ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮಾತನಾಡುವ ನೈತಿಕ ಹಕ್ಕು ಆನಂದ್ ಅಸ್ನೋಟಿಕರ್ ಗಿಲ್ಲ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು ಈ ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವರ ಸಂಸ್ಕೃತಿ ಬಿಂಬಿಸುತ್ತದೆ .ಆನಂದ ಆಸ್ನೋಟಿಕರ
ಅವರಿಗೆ ಸೂಕ್ತ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂದ ಅವರು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಅವರಿಗೆ ಸಲಹೆ ನೀಡಿದರು. ಆನಂದ್ ಆಸ್ನೋಟಿಕರ ಚುನಾವಣೆಯಲ್ಲಿ ಅನಂತ ಕುಮಾರ್ ಅವರ ವಿರುದ್ಧ 4ಲಕ್ಷಗಳ ಮತಗಳ ಅಂತರದಿಂದ ಸೋತರು ಅನಂತಕುಮಾರ ಅವರ ಶಕ್ತಿ ಏನೆನ್ನುವುದನ್ನು ತಿಳಿಯುವಷ್ಟು ಬುದ್ಧಿ ಶಕ್ತಿ ಅವರಿಗಿಲ್ಲ ಅಂತಾಯಿತು .ಕ್ಷೇತ್ರದ ಜನತೆಗೆ ಅನಂತ ಕುಮಾರ ಅವರು ಏನು ಎನ್ನುವುದು ಗೊತ್ತಿದೆ. ಇಂಥ ಹೇಳಿಕೆ ನೀಡುವುದು ಕೊನೆಯಾಗಬೇಕು .ಅಸ್ನೋಟಿಕರ್ ಮಾತನಾಡುವ ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳಬೇಕು ಎಂದು ಖಾರವಾಗಿ ಹೇಳಿದ ಶಾಸಕರು ಸಂಸದ ಅನಂತ ಕುಮಾರ ಹೆಗ್ಡೆಯವರು ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ ಅವರ ಆರೋಗ್ಯದ ಕುರಿತು ಇಲ್ಲಸಲ್ಲದ ಮಾತನಾಡುವುದನ್ನು ನಾವು ಮತ್ತು ಭಟ್ಕಳ ಬಿಜೆಪಿ ಮಂಡಲ ಸಹಿಸುವುದಿಲ್ಲ ಎಂದರು. ಸದಾ ಗೋವಾದಲ್ಲಿ ಇರುವ ಆನಂದ ಅಸ್ನೋಟಿಕರ ಅವರು ಆದಷ್ಟು ಬೇಗ ಯಾವುದಾದರೂ ಒಳ್ಳೆಯ ಮಾನಸಿಕ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಸೇರಬೇಕು ಎಂದು ಸಲಹೆ ನೀಡಿದರು.
ನಂತರ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ ಮಾತನಾಡಿ ಸಂಸದ ಅನಂತಕುಮಾರ ಹೆಗಡೆ ಅವರ ಬಗ್ಗೆ ಮಾತನಾಡಲು ಆನಂದ ಆಸ್ನೋಟಿಕರ ಅವರಿಗೆ ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಲ್ಲದೆ ಅಸ್ನೋಟಿಕರ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಈ ರೀತಿ ಮಾತನಾಡುತ್ತಿದ್ದಾರೆ. ಈಗಾಗಲೇ ರಾಜಕೀಯ ಮೂಲೆಗುಂಪಾಗಿರುವ ಆನಂದ ಅಸ್ನೋಟಿಕರ ಆದಷ್ಟು ಬೇಗ ಮಾನಸಿಕ ಚಿಕಿತ್ಸೆ ಪಡೆಯುವುದು ಅಗತ್ಯವಿದೆ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಹತಾಶರಾಗಿರುವ ಅಸ್ನೋಟಿಕರ್ ಸಂಸದರ ಆರೋಗ್ಯ ಬಗ್ಗೆ ಏನೇನೂ ಹೇಳುವುದು ಸರಿ ಕಾಣುವುದಿಲ್ಲ ಸಂಸದ ಅನಂತಕುಮಾರ್ ಹೆಗಡೆಯವರು ಆರೋಗ್ಯದಿಂದಿದ್ದಾರೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತರಾಮ, ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ರಾಜೇಶ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ ನಾಯ್ಕ, ಭಾಸ್ಕರ ದೈಮನೆ ಮುಖಂಡರಾದ ದಿನೇಶ್ ನಾಯ್ಕ, ಈಶ್ವರ ದೊಡ್ಮನೆ, ಬಿಜೆಪಿ ಯುವ ಘಟಕದ ಅಧ್ಯಕ್ಷ ಮಹೇಂದ್ರ ನಾಯ್ಕ ,ವೆಂಕಟೇಶ ನಾಯ್ಕ ಈಶ್ವರ ನಾಯ್ಕ ಬೈಲೂರು ,ಕುಮಾರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು
Leave a Comment