ಮೈಸೂರು : ಹೆಬ್ಬಾವು ಅಂತ ವಿಷಪೂರಿತ ಹಾವನ್ನು ಹಿಡಿಯಲು ಹೋಗಿ ಯುವಕನೊಬ್ಬ ತನ್ನ ಜೀವವನ್ನೆ ಕಳೆದುಕೊಂಡಿದ್ದಾನೆ. ಈ ಘಟನೆ ಮೈಸೂರಿನಲ್ಲಿ ನಡೆದಿದ್ದು ಸದ್ಯ ಈತ ಹಾವು ಹಿಡಿಯುತ್ತಿರುವ ಮತ್ತು ಹಾವು ಕಚ್ಚಿದ ದೃಶ್ಯ ವೈರಲ್ ಆಗಿದೆ.
ನಗರದ ವಿದ್ಯಾರಣ್ಯಪುರಂ ನಿವಾಸಿ ಮಧು (24)ಮೃತ. ಮ್ಯಸೂರಿನಿಂದ ಮಹದೇಶ್ವರ ಬೇಟ್ಟಕ್ಕೆ ಎಲೆಕ್ಟ್ರಿಕ್ ಕೆಲಸ ನಿಮಿತ್ತ ಸ್ನೇಹಿತರೊಂದಿಗೆ ಮಧು ಹೋಗಿದ್ದ. ಅಲ್ಲಿ ಹಾವು ಬಂದಿದ್ದು, ಅದನ್ನು ಹೆಬ್ಬಾವು ಅಂತ ಹಿಡಿದಿದ್ದಾನೆ . ಕತ್ತನ್ನ ಹಿಡಿಯಲು ಯತ್ನಿಸುತ್ತಿರುವಾಗಲೇ ಕೈಗೆ ಹಾವು ಕಚ್ಚಿದೆ. ಆಸ್ಪತ್ರೆಗೆ ದಾಖಲಿಸಿದರೂ ಮಧು ಬದುಕಲ್ಲಿಲ್ಲ.
ವಿಷದ ಹಾವು ಎಂದು ತಿಳಿಯದೆ ಹೆಬ್ಬಾವು ಅಂತ ಬೇಜವಾಬ್ದಾರಿಯಾಗಿ ಹಾವು ಹಿಡಿಯಲು ಹೋದ ಮಧು ಪ್ರಾಣ ಬಿಟ್ಟಿದ್ದಾನೆ.
Leave a Comment