ಭಟ್ಕಳ ತಾಲೂಕಿನ ವೆಂಕಟಾಪುರದ ದೇವಸ್ಥಾನದ ಎದರು ನಿಲ್ಲಿಸಿಟ್ಟಿದ್ದ ಶಿಕ್ಷಕರೋರ್ವರ ಬೈಕ್ ಕಳ್ಳತನವಾಗಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಒಂದು ತಿಂಗಳ ಬಳಿಕ ಮಂಗಳವಾರ ದೂರು ದಾಖಲಾಗಿದೆ.
ಭಟ್ಕಳ ತಾಲೂಕಿನ ಶಿರಾಲಿ, ವೆಂಕಟಾಪುರದ ಶ್ರೀ ಲಕ್ಷಿö್ಮÃ ವೆಂಕಟೇಶ ದೇವಸ್ಥಾನದ ಹತ್ತಿರದ ನಿವಾಸಿಯಾಗಿರುವ ಶಿಕ್ಷಕ ಕಾಂತರಾಜ ಪುರುಷೋತ್ತಮ ಮೊಗೇರ್ ಎನ್ನುವವರ ಬೈಕ್ ಕಳ್ಳತನವಾಗಿದೆ. ಇವರು ತಮ್ಮ ಬೈಕನ್ನು ಕಳೆದ ಏಪ್ರಿಲ್ 27 ರಂದು ಸಂಜೆ 6 ಗಂಟೆಗೆ ಭಟ್ಕಳ ತಾಲೂಕಿನ ಶಿರಾಲಿ, ವೆಂಕಟಾಪುರದ ಶ್ರೀ ಲಕ್ಷಿö್ಮÃ ವೆಂಕಟೇಶ ದೇವಸ್ಥಾನದ ಹತ್ತಿರ ನಿಲ್ಲಿಸಿಟ್ಟು ತೆರಳಿದ್ದರು. ಆದರೆ ಏಪ್ರಿಲ್ 29 ರಂದು ಬಂದು ನೋಡಿದಾಗ ಬೈಕ್ ಅಲ್ಲಿರದೇ ಕಳ್ಳತನವಾಗಿತ್ತು. ಹೀಗಾಗಿ ಕಳೆದು ಹೋದ ಬೈಕ್ಗಾಗಿ ಹುಡುಕಾಟ ನಡೆಸಿದ ಅವರು ಸಿಗದಿದ್ದಾಗ ಒಂದು ತಿಂಗಳ ಬಳಿಕ ಮಂಗಳವಾರ ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment