ಭಟ್ಕಳ: ಅಡಿಕೆ ಮರಕ್ಕೆ ಮದ್ದು ಸಿಂಪರಣೆ ಮಾಡುವಾಗ ಅಡಿಕೆ ಮರ ತುಂಡಾಗಿ ಬಿದ್ದಿದ್ದರಿಂದ ಕೃಷಿಕನೋರ್ವ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಮಾರುಕೇರಿ ಹೂತ್ಕಳದಲ್ಲಿ ಸಂಭವಿಸಿದೆ.
ಅಡಿಕೆ ಮರವನ್ನು ಹತ್ತಿ ಮದ್ದು ಸಿಂಪರಣೆ ಮಾಡುತ್ತಿದ್ದ ಕೃಷಿಕ ಚಂದ್ರಶೇಖರ ಅಣ್ಣಪ್ಪ ಶೆಟ್ಟಿ (49) ಎನ್ನುವವರೇ ಮೃತ ಪಟ್ಟವರಾಗಿದ್ದಾರೆ. ಕೃಷಿ ಕೂಲಿಯನ್ನು ಮಾಡಿಕೊಂಡಿದ್ದ ಇದರು ಅಡಿಕೆ ಕೊಯ್ಲು ಮಾಡುವುದು, ಮರಕ್ಕೆ ಮದ್ದು ಸಿಂಪರಣೆ ಮಾಡುವುದು ಮಾಡಿಕೊಂಡಿದ್ದು ಇಂದು ಅಡಿಕೆ ಮರವೇ ಮುರಿದಿದ್ದರಿಂದ ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ. ಈ ಕುರಿತು ಅವರ ಪುತ್ರ ಶರಣೇಶ ಚಂದ್ರಶೇಖರ ಶೆಟ್ಟಿ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಎ.ಎಸ್.ಐ. ದಿನೇಶ ಅವರು ತನಿಖೆ ಕೈಗೊಂಡಿದ್ದಾರೆ.
Leave a Comment