ಹೊನ್ನಾವರ: ತಾಲೂಕಿನ ನಾಲ್ಕು ಜನ ಮಂಗಲಮುಖಿಯರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಕಿಟ್ ಧರ್ಮಸ್ಥಳ ಯೋಜನೆ ವಿತರಿಸಿದೆ. ಕೊರೋನಾ ಮಹಾಮಾರಿಯಿಂದ ಪಟ್ಟಣದ ಅಂಗಡಿಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಅಂಗಡಿ ಬಂದ್ ಆಗಿರುದರಿಂದ ಪ್ರತಿನಿತ್ಯದ ಊಟಕ್ಕೂ ಸಮಸ್ಯೆ ಎದುರಾಗಿತ್ತು.ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಹಾಗೂ ಸಾಂಬಾರು ಪದಾರ್ಥ ಸಾಮಗ್ರಿಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡುವ ಮೂಲಕ ನೆರವಾಗಿದೆ.ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ವಾಸಂತಿ ಅಮೀನ್, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಮೇಲ್ವಿಚಾರಕ ನಾಗರಾಜ್ ಕೆ.ಜಿಲ್ಲಾ ಪ್ರಬಂಧಕ ಗೋಪಾಲ್, ಕಛೇರಿ ಪರಿವಿಕ್ಷಕ ಪ್ರಥ್ವಿರಾಜ್ ಉಪಸ್ಥಿತರಿದ್ದರು.

Leave a Comment