ಭಟ್ಕಳ: ತಾಲೂಕಿನ ಸಂಶುದ್ದೀನ ಸರ್ಕಲ ನಲ್ಲಿ ಆಂಬುಲೆನ್ಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ್ದು ಅದ್ರಷ್ಟವಾಸಾತ್ ಯಾವುದೇ ಪ್ರಾಣ ಹಾನಿಯಾಗದಿರುವ ಘಟನೆ ರವಿವಾರ ವರದಿ ಯಾಗಿದೆ
ಹೊನ್ನಾವರದಿಂದ ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ಅದೇ ಮಾರ್ಗವಾಗಿ ಬರುತ್ತಿದ್ದ ಆಟೋ ಸಂಶುದ್ದೀನ ಸರ್ಕಲನಲ್ಲಿ ಬಂದರ್ ರಸ್ತೆಗೆ ತಿರುಗುವ ವೇಳೆ ಅಂಬ್ಯುಲೆನ್ಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಆಂಬ್ಯುಲೆನ್ಸ್ ಬಡಿದ ರಭಸಕ್ಕೆ ಆಟೋ ಪಲ್ಟಿಯಾಗಿ ಬಿದಿದ್ದು ಆಟೋ ಚಾಲಕನಿಗೆ ತಲೆ ಹಾಗೂ ಕಾಲಿಗೆ ಪೆಟ್ಟಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಆಂಬುಲೆನ್ಸನಲ್ಲಿದ್ದ ರೋಗಿಯನ್ನು ಇನ್ನೊಂದು ಆಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಂಬ್ಯುಲೆನ್ಸ್ ಚಾಲಕ ಸುರಕ್ಷಿತರಾಗಿರುವ ಬಗ್ಗೆ ತಿಳಿದು ಬಂದಿದೆ.
Leave a Comment