• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬ್ಲಾಕ್ ಕಾಂಗ್ರೇಸ್‍ನಿಂದ ಮನೆ ಮನೆ ಭೇಟಿ

July 2, 2021 by Sachin Hegde Leave a Comment

ಹೊನ್ನಾವರ : ಕಾಂಗ್ರೇಸ್ ಪಕ್ಷ ಕೋವಿಡ್-19 ರಿಲೀಫ್ ಟಾಸ್ಕ್ ಪೋರ್ಸ ಜೊತೆ ಸಮಾಲೋಚನೆ ನಡೆಸಿ ರಾಷ್ಟ್ರಾಧ್ಯಂತ ಜನರನ್ನು ತಲಪುವ ಅಭಿಯಾನವನ್ನು ರೂಪಿಸಿದೆ. ಈ ಅಭಿಯಾನದಂತೆ ಪಂಚಾಯತ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಕೋವಿಡ್‍ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕುವ ಗುರಿ ಹೊಂದಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು. ಅವರು ಇಂದು ಹೊನ್ನಾವರ ಪಟ್ಟಣದ ಗಾಂಧಿನಗರದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ “ಕೋವಿಡ್-19 ಸಹಾಯ ಹಸ್ತ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

IMG 20210702 120023 scaled
IMG 20210702 120955 scaled

ಕೆ.ಪಿ.ಸಿ.ಸಿ. ನಿರ್ದೇಶನದಂತೆ ಮುಂದಿನ ಮೂವತ್ತು ದಿನಗಳ ಕಾಲ ಪ್ರತಿ ಪಟ್ಟಣ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ “ಕೋವಿಡ್-19 ಸಹಾಯ ಹಸ್ತ” ಅಭಿಯಾನ ನಡೆಯಲಿದ್ದು, ಈ ಕುರಿತಂತೆ ಬ್ಲಾಕ್ ಮಟ್ಟದಲ್ಲಿ 10 ಮುಖಂಡರ ತಂಡವನ್ನೊಳಗೊಂಡ ವಾರಿಯರ್ಸ ಗ್ರೂಪ್ ರಚಿಸಲಾಗಿದೆ ಎಂದರು. ಪ್ರತಿ ದಿನ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಬರುವ 15 ಮನೆಗಳಿಗೆ ವಾರಿಯರ್ಸಗಳು ಭೇಟಿ ನೀಡಿ ಕೆ.ಪಿ.ಸಿ.ಸಿ. ನಿಗದಿ ಪಡಿಸಿದ “ಸಹಾಯಹಸ್ತ ನಮೂನೆ”ಯಲ್ಲಿ ಮಾಹಿತಿ ಸಂಗ್ರಹಿಸಿ ಕೆ.ಪಿ.ಸಿ.ಸಿ. ಟಾಸ್ಕ್ ಪೋರ್ಸಗೆ ರವಾನಿಸಿ, ತೊಂದರೆಗೊಳಗಾದ ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದು ಬಿ.ಸಿ.ಸಿ. ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು.

ಪ್ರತಿ ಪಂಚಾಯತ ಘಟಕಗಳ ಅಧ್ಯಕ್ಷರೇ “ಹೆಲ್ತ್ ವಾರಿಯರ್ಸ್” ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಉಸ್ತುವಾರಿಗಳಾಗಿ ಪಕ್ಷದ ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ, ವಿನೋದ ನಾಯ್ಕ, ಕರ್ಕಿ, ದಾಮೋದರ ನಾಯ್ಕ ಹಳದೀಪುರ, ಸುರೇಶ ಪಟಗಾರ ನವೀಲಗೋಣ, ಕೆ.ಎಚ್. ಗೌಡ ಚಂದಾವರ, ಮಂಜುನಾಥ ಭಟ್ಟ ಕಡ್ಲೆ, ಗಜಾನನ ನಾಯ್ಕ, ಸಾಲ್ಕೋಡ, ಸಂದೇಶ ಶೆಟ್ಟಿ, ಹೊಸಾಕುಳಿ, ರವಿ ಶೆಟ್ಟಿ ಕವಲಕ್ಕಿ, ಕೇಶವ ಮೇಸ್ತ ಹೊನ್ನಾವರ ಇವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ ವಂದಿಸಿದರು. ಸಭೆಯಲ್ಲಿ ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಬಾಲಚಂದ್ರ ನಾಯ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಶೇಖ್, ಹಿ. ವರ್ಗ ವಿಭಾಗದ ಕಾರ್ಯದರ್ಶಿ ಗಜು ನಾಯ್ಕ, ಮಂಜು ಖಾರ್ವಿ, ಸುಭಾಷ ಮೇಸ್ತ, ಕೃಷ್ಣ ಹರಿಜನ, ಕೃಷ್ಣ ಮಾರಿಮನೆ, ಕಾರ್ತಿಕ ಬಿ., ಹನೀಫ್ ಶೇಖ್, ಜೊಸೇಫ್ ಡಿಸೋಜಾ, ಮಹೇಶ ನಾಯ್ಕ, ನೆಲ್ಸನ್ ರೊಡ್ರಿಗೀಸ್, ಉದಯ ಮೇಸ್ತ, ಇನ್ನು ಮುಂತಾದವರು ಉಪಸ್ಥಿತರಿದ್ದರು.

IMG 20210702 115109 scaledIMG 20210702 114159 scaled

ಸಭೆಯ ನಂತರ ಗಾಂಧಿನಗರದ ಶ್ರೀಮತಿ ಬದ್ರುನಿಸ್, ಪರಮೇಶ್ವರ ಮೇಸ್ತ, ಕೊನ್ಸೆಪ್ಟಾ ಡಾಯಸ್, ಅಂತೋನಿ ಲುದ್ರಿಂಗ್, ಇನ್ನು ಹಲವಾರು ಮನೆಗಳಿಗೆ ತೇರಳಿ ಕೋವಿಡ್‍ನಿಂದ ಆದ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಲಾಯಿತು.



  


  





Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಕಡತೋಕಾ, ಕರ್ಕಿ, ಕೋವಿಡ್-19 ಸಹಾಯ ಹಸ್ತ”, ಗ್ರಾಮ ಪಂಚಾಯತ, ದಾಮೋದರ, ದಿನಗಳ ಕಾಲ ಪ್ರತಿ ಪಟ್ಟಣ, ರಾಷ್ಟ್ರಾಧ್ಯಂತ ಜನರನ್ನು, ವಿನೋದ ನಾಯ್ಕ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...