• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸುನೀಲ ನಾಯ್ಕ ಎರಡು ನಾಲಿಗೆ ಹೊಂದಿರುವ ಶಾಸಕ;ಮಂಕಾಳ ವೈದ್ಯ ಗಂಭೀರ ಆರೋಪ

July 18, 2021 by Vishwanath Shetty Leave a Comment

ಸುನೀಲ ನಾಯ್ಕ ಎರಡು ನಾಲಿಗೆ ಹೊಂದಿರುವ ಶಾಸಕ. ರಾಜ್ಯದಲ್ಲೆ ಸುಳ್ಳಿನ ಸರದಾರ ಶಾಸಕ ಸುನೀಲ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಗಂಭೀರ ಆರೋಪ ಮಾಡಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದರು ಕಾಮಗಾರಿ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಮನೆ ಹಾಗೂ ಮೀನುಗಾರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಮಳೆಗಾಲ ಕೊರೋನಾ ವಿಕೆಂಡ್ ಕಪ್ರ್ಯೂ ನಡುವೆ 500ಕ್ಕೂ ಹೆಚ್ಚಿನ ಪೋಲಿಸರನ್ನು ಇಟ್ಟು ರಸ್ತೆ ಮಾಡಲು ಮುಂದಾಗುತ್ತಿದ್ದಾರೆ.

ಕಾಸರಕೋಡ ವಾಣಿಜ್ಯ ಬಂದರು ಅಭಿವೃದ್ಧಿಗೆ 2010 ರಲ್ಲಿಯೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷ್ಣ ಪಾಲೇಮಾರ್ ಅವರು ಬಂದರು ಇಲಾಖೆ ಸಚಿವರಿದ್ದಾಗ 10 ಎಕರೆ ಜಾಗ ಮಾತ್ರ ಮಂಜೂರಿಯಾಗಿತ್ತು. ಆ ಸಂದರ್ಭದಲ್ಲಿ ಮೀನುಗಾರ ಮನೆಗಳಿಗೆ ಮತ್ತು ಅವರ ಬದುಕಿಗೆ ಯಾವುದೇ ತೊಂದರೆಯಾಗದಂತೆ ಬಂದರು ಅಭಿವೃದ್ಧಿ ಮಾಡುವ ಷರತ್ತಿನ ಅನ್ವಯ 2017 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದಾರೆ.

IMG20210717170106

ಆದರೆ ನಂತರ ಈ ಕಂಪನಿಗೆ ಹೆಚ್ಚಿನ ಭೂಮಿಯನ್ನು ಮತ್ತು ಹೆಚ್ಚಿನ ಅನುದಾನವನ್ನು ನೀಡಿ ಕಾಸರಕೋಡ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ರಸ್ತೆ ನಿರ್ಮಾಣದ ಹೆಸರಿನಲ್ಲಿ ತೆಂಗಿನ ಮರಗಳನ್ನು ಕಡಿಯುತ್ತಿದ್ದಾರೆ. ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ದಿನಕರ ಶೆಟ್ಟಿ ಹೇಳಿಕೆ ಪ್ರತಿಕ್ರಿಯಿಸಿ ಸರ್ಕಾರದ ಜಾಗದಲ್ಲಿ ಮನೆ ಕಟ್ಟಿಕೊಂಡವರನ್ನು ತೆರವುಗೊಳಿಸುವ ಅಧಿಕಾರ ನಮಗಿದೆ ಎಂದು ಹೇಳಿಕೊಂಡಿದ್ದಾರೆ.

ಇವತ್ತು ಅವರಿಬ್ಬರನ್ನು ಶಾಸಕರನ್ನಾಗಿ ಮಾಡಿದ್ದು ಕ್ಷೇತ್ರದ ಜನರು. ಅವರಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ಸುಮಾರು 25 ಸಾವಿರ ಜನರು ಹಲವು ದಶಕಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಡವರೂ ಇದ್ದಾರೆ. ಮುಂದೆ ಚುನಾವಣೆ ಇದೆ. ಅವರ ಭದ್ರತೆ ಅವರೆ ಮಾಡಿಕೊಂಡು ನಿಮ್ಮನ್ನು ಆ ಸ್ಥಾನದಿಂದ ಕೆಳಗೆ ಇಳಿಸಬಹುದು ಎಚ್ಚರದಿಂದ ನಡೆಯುವಂತೆ ಸಲಹೆ ನೀಡಿದರು.

ಒಕ್ಕಲೆಬ್ಬಿಸುವ ಮಾತನಾಡುತ್ತಿರುವ ಶಾಸಕರಿಗೆ ಮಾನವೀಯತೆಯಿಲ್ಲ. ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ 1700 ಕೋಟಿ ರೂ. ಅನುದಾನ ತಂದಿರುವುದನ್ನು ಒಪ್ಪಿಕೊಂಡಿರುವ ಸುನೀಲ್ ನಾಯ್ಕ ತಾನು 300 ಕೋಟಿ ರೂ. ತಂದಿದ್ದೇನೆ, ಸೇತುವೆ ತಂದಿದ್ದೇನೆ ಎಂದೆಲ್ಲ ಹೇಳುತ್ತಾರೆ. ಎಲ್ಲಿದೆ ಅವರು ತಂದಿರುವ ಕಾಮಗಾರಿ ತೋರಿಸಲಿ. ಸುಳ್ಳು ಹೇಳುವುದನ್ನು ಮತ್ತು ಪತ್ರಿಕೆಗಳಿಗೆ ಸುಳ್ಳು ಮಾಹಿತಿ ಕೊಡುವುದನ್ನು ನಿಲ್ಲಿಸಬೇಕು. ನನ್ನ ಅವಧಿಯಲ್ಲಿ ಸಾವಿರಾರು ಮನೆಗಳನ್ನು ಕೊಡಿಸಿದ್ದೇನೆ. ನೂರಾರು ಜನರಿಗೆ ಹಕ್ಕುಪತ್ರವನ್ನು ಕೊಡಿಸಿದ್ದೇನೆ. ಇವರಿಗೆ ಒಂದು ಹಕ್ಕುಪತ್ರ ಕೊಡಿಸುವ ಯೋಗ್ಯತೆಯಿಲ್ಲ.

ನಾವೆಲ್ಲ ಕಾಸರಕೋಡ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅವರ ರಕ್ಷಣೆಗೆ ನಿಲ್ಲುತ್ತೇವೆ ಎಂದು ಹೇಳಿದರು. ಮಂಕಿ ಅನಂತವಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೆ ನಂಬರ್ 315 ಮತ್ತು 316 ಪ್ರದೇಶದ ಜಾಗವನ್ನು ಕಂಪನಿಗೆ ಮೀಸಲಿಟ್ಟಿವರು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ಸಂಸ್ಕ್ರತಿ ಟೋಲಕಿಟ್ ಎಂದು ಹೇಳುತ್ತಾ 2003ರಿಂದ ಡಾ ಚಿತ್ತರಂಜನ್, ತಿಮ್ಮಪ್ಪ ನಾಯ್ಕ, ಹಿಂದು ಮುಸ್ಲಿಂ ಗಲಭೆ, ಪರೇಶ ಮೇಸ್ತ, ಮಾಗೋಡ್ ಪ್ರಕರಣ ಟೋಲಕಿಟ್ ಮಾಡಿದವರು ಯಾರು ಎಂದು ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ಹೇಳಿಕೆಗೆ ತಿರುಗೇಟು ನೀಡುತ್ತಾ ಅಧಿಕಾರವಿಲ್ಲದಿದ್ದಾಗ ಯಾವ ಗಟನೆ ನಡೆದರೂ ರಾಜ್ಯ ರಾಷ್ಟ್ರ ನಾಯಕರ ಕರೆತರುವುದು ಸಾಧನೆ ಅಲ್ಲ ಅಧಿಕಾರ ಇದ್ದಾಗ ಆ ಕುಟುಂಬಕ್ಕೆ ನ್ಯಾಯ ಒದಗಿಸಿ ಬಡವರ ಕಣ್ಣಿರು ಒರೆಸುವ ಜೊತೆ ಕ್ಷೇತ್ರಕ್ಕೆ ಅನುದಾನ ತರುವಂತೆ ನೋಡಿಕೊಳ್ಳಿ ಎಂದು ಬಿಜೆಪಿಗೆ ಕಿವಿಮಾತು ಹೇಳಿದರು,


ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ, ತಾ.ಪಂ.ಅಧ್ಯಕ್ಷ ಉಲ್ಲಾಸ ನಾಯ್ಕ, ಜಿ.ಪಂ. ಸದಸ್ಯ ಪುಷ್ಪಾ ನಾಯ್ಕ, ಮಾಜಿ. ಜಿ.ಪಂ.ಸದಸ್ಯರಾದ ವನಿತಾ ನಾಯ್ಕ, ಕೃಷ್ಣ ಗೌಡ, ತಾ.ಪಂ.ಸದಸ್ಯರಾದ ಗಣಪಯ್ಯ ಗೌಡ, ಅಣ್ಣಯ್ಯ ನಾಯ್ಕ, ಲೋಕೇಶ ನಾಯ್ಕ, ರಾಜು ನಾಯ್ಕ ಮಂಕಿ, ವಾಮನ ನಾಯ್ಕ, ಸತೀಶ ನಾಯ್ಕ, ಶ್ರೀಧರ ನಾಯ್ಕ, ಸುನೀತಾ ಶೇಟ್, ರೇಖಾ ನಾಯ್ಕ, ನಾಗವೇಣಿ ನಾಯ್ಕ, ಐ.ವಿ.ನಾಯ್ಕ, ಗಜು ನಾಯ್ಕ ಇತರರು ಉಪಸ್ಥಿತರಿದ್ದರು.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಡಾ ಚಿತ್ತರಂಜನ್, ತಿಮ್ಮಪ್ಪ ನಾಯ್ಕ, ಪರೇಶ ಮೇಸ್ತ, ಬಂದರು ಕಾಮಗಾರಿ, ಬಿಜೆಪಿ ಸಂಸ್ಕ್ರತಿ ಟೋಲಕಿಟ್, ಮಾಗೋಡ್ ಪ್ರಕರಣ ಟೋಲಕಿಟ್, ವಿಷಯದಲ್ಲಿ ದಿನಕ್ಕೊಂದು ಹೇಳಿಕೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಮುಸ್ಲಿಂ ಗಲಭೆ, ಹೇಳುತ್ತಾ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...