ದಾವಣಗೆರೆ :
ಅಧಿಕೃತ ವೀಸಾದೊಂದಿಗೆ ಸೌದಿ ಅರೇಬಿಯಾಯಾಕ್ಕೆ ಹೋಗಿ ನೆಮ್ಮದಿಯ ಜೀವನ ಕಂಡುಕೊ0ಡ ಭಾರೆತಿಯರ ಸಂಖ್ಯೆ ಅಧಿಕ ಇದೆ. ಇದರ ಜತೆಗೆ ಕೆಲಸ ಕೊಡಿಸುವುದಾಗಿ ಹೇಳಿ ವಿಸಿಟಿಂಗ್ ವೀಸಾದಲ್ಲಿ ಕರೆದುಕೊಂಡು ಹೋಗಿ ಗೃಹಬಂಧನದಲ್ಲಿ ಇಡುವ ದಂಧೆಯೂ ಅವ್ಯಾಹತವಾಗಿ ನಡೆದಿದೆ. ಸಿಲುಕಿಕೊಂಡಿರುವವರೆಲ್ಲರೂ ಮಹಿಳೆಯರೇ ಆಗಿದ್ದಾರೆ
ಕರ್ನಾಟಕ ದಾವಣಗೆರೆ, ತುಮಕೂರ, ಮೈಸೂರ, ಶ್ರೀರಂಗಪಟ್ಟಣ, ಮಂಡ್ಯ ಹೀಗೆ ನಾನಾ ಕಡೆಯಿಂದ ಮಹಿಳೆಯರು ಸೌದಿಗೆ ಹೋಗಿ ಸಿಲುಕಿಕೊಂಡಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಬಿಹಾರ ಸಹಿತ ವಿವಿಧ ರಾಜ್ಯಗಳಿಂದಲೂ ಇದೇ ರೀತಿ ಮಹಿಳೆಯರನ್ನು ಸಾಗಾಟ ಮಾಡಲಾಗುತ್ತಿದೆ.

ನಾನು ಭಾರತಕ್ಕೆ ಬರುವ ಪ್ರಯತ್ನದಲ್ಲಿ ಗಲಾಟೆ ಆಗಿದ್ದರಿಂದ ನನ್ನನ್ನು ಕಫೀಲ್ (ಪ್ರಾಯೋಜಕ) ಮನೆಗೆ ಕರೆತಂದಿದ್ದರು. ಆಗ ಅಲ್ಲಿ ಸಬಿಹಾ ಪರಿಚಯವಾಯಿತು. ಅವರೂ ಸಿಲುಕಿರುವುದು ಗೊತ್ತಾಯಿತು. ಇದಲ್ಲದೇ ಐದಾರು ವರ್ಷಗಳಿಂದ ಸೌದಿಯಿಂದ ಊರಿಗೆ ಮರಳಲಾರದೇ ಸಿಕ್ಕಿಹಾಕಿಕೊಂಡಿರುವ ಹಲವು ಮಹಿಳೆಯರು ಅಲ್ಲಿದ್ದರು. ಅದರಲ್ಲಿ ಮೈಸೂರು, ಮಂಡ್ಯ ಶ್ರೀರಂಗಪಟ್ಟಣದವರೂ ಇದ್ದರು ಎಲ್ಲರೂ ಬಡತನದಿಂದಾಗಿ ದುಡಿಯಲು ಬಂದವರು
ನನಗೆ ಮತ್ತು ಸಬಿಹಾಗೆ ಹೇಗೋ ಭಾರತಕ್ಕೆ ಮರಳಲು ಅವಕಾಶ ಸಿಕ್ಕಿತು. ಉಳಿದವರು ಇನ್ನೂ ಅಲ್ಲೇ ನರಳುತ್ತಿದ್ದಾರೆ ಎಂದು ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದ ಫೈರೋಜಾಬಾನು ತಿಳಿಸಿದ್ದಾರೆ.
ಭಾರತದಿಂದಷ್ಟೇ ಅಲ್ಲ. ಇಂಡೋನೇಷ್ಯಾ ಬಾಂಗ್ಲಾದೇಶದಿAದದಲೂ ಇದೇ ರೀತಿ ಮಹಿಳೆಯರನ್ನು ಸೌದಿಯಲ್ಲಿರುವ ಕನ್ನಡಿಗ ಪಿ.ಎ. ಹಮೀದ್ ಪಡುಬಿದ್ರಿ ವಿವರಿಸಿದ್ದಾರೆ.
Leave a Comment