ಹೊನ್ನಾವರ; ತಾಲೂಕಿನ ಮೊಳ್ಕೋಡ ಗ್ರಾಮದ ಮಾದೇವಿ ಸುಬ್ರಾಯ ಅಂಬಿಗ ಶರಾವತಿ ನದಿಯಲ್ಲಿ ತಮ್ಮ ದೋಣಿಯಲ್ಲಿ ಪತಿಯೊಂದಿಗೆ ಮೀನುಗಾರಿಕೆಗಾಗಿ ತೆರಳಿದ್ದಾಗ ಭಾರೀ ಗಾಳಿ ಮಳೆಗೆ ದೋಣಿಯಿಂದ ಆಕಸ್ಮೀಕವಾಗಿ ಬಿದ್ದು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರ ಪತಿ ಸುಬ್ರಾಯ ಜಡಿಯಾ ಅಂಬಿಗ ಈಜಿಕೊಂಡು ಬಂದು ದಡ ಸೇರಿರುತ್ತಾರೆ.
ನದಿಯಲ್ಲಿ ಮುಳುಗಿದ ಮಾದೇವಿ ಮೃತ ದೇಹವನ್ನು ಶೋಧನಾ ಕಾರ್ಯಾಚರಣೆ ಮೂಲಕ ಪತ್ತೆ ಮಾಡಿ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮರೊಣೊತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಗಿದೆ. ಈ ಸಂಭದ ಮಂಕಿ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment