ಶಿರಸಿ : ರಸ್ತೆ ಬದಿಯ ದನ ಕರುಗಳನ್ನು ಕಾರಿನಲ್ಲಿ ತುಂಬಿಕೊAಡು ಪರಾರಿಯಾಗುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಗೋ ಚೋರರನ್ನು ಶಿರಸಿ ಪೊಲೀಸರು ಇಲ್ಲಿನ ಕೋಟೆಕೆರೆ ಬಳಿ ಬಂಧಿಸಿದ ಘಡನೆ ನಡೆದಿದೆ.
ಶವಮ್ಗೊದ ಮತ್ತೂರು ರಸ್ತೆಯ ಈದ್ಗಾನಗರದ ಅಬ್ದುಲ್ ಅಜೀಜ್ ತಂದೆ ಅಬ್ದುಲ್ ಗಫಾರ (29) ಹಾಗೂ ಸಕ್ಷಿಣ ಕನ್ನಡ ಬಜಪೆಯ ಕೊಳಂಜೆ ಕೊಂಚೂರಿನ ಫೈಜಲ್ ಅಬ್ಚಲ್ ರಜಾಕ್ (36) ಬಂಧಿತ ಆರೋಪಿಗಳು. ಇನ್ನು ಬಂಧನದ ಸಮಯದಲ್ಲಿ ಶಿವಮ್ಗೊಗ ಇಮ್ರಾನ್, ಆಯಾಸ್ ಹಾಗೂ ರೆಹಮಾನ್ ಎಂಬ ಮೂವರು ಪರಾರಿಯಾಗಿದ್ದು ಹುಡುಕಾಟ ನಡೆದಿದೆ.
ಕೋಟೆಕೆರೆ ಜಂಕ್ಷನ್ ಹತ್ತಿರ ಪೊಲೀಸರು ನಾಕಾಬಂದಿ ಮಾಡಿ ವಾಹನಗಳನ್ನು ಚಕ್ ಮಾಡುತ್ತಿರುವಾಗ ಫಾರ್ಚುನರ್ ಕಾರು ಹಾಗೂ ಕಾರು ಹಾಗೂ ಕೇಟಾ ಕಾರನ್ನು ತಡೆದು
ನಿಲ್ಲಿಸಿದಾಗ ಫಾರ್ಚುನರ್ ಕಾರಿನಲ್ಲಿದ್ದ ಮೂವರು ವಾಹನಗಳನ್ನು ಬಿಟ್ಟು ಓಡಿ ಹೋದರು. ಕ್ರೇಟಾ ಕಾರಿನಲ್ಲಿದ್ದ ಇಬ್ಬರು ಓಡಲು ಪ್ರಯತ್ನಿಸಿದಾಗ ಪೊಲೀಸರು ಹಿಡಿದು ವಿಚಾರಿಸಿದ್ದು, ಆರೋಪಿತರು ತಾವು ಶಿರಸಿಗೆ ದನ ಕಳವು ಮಾಡಲು ಬಂದಿದ್ದಾಗಿಯೂ ಮತ್ತು ಈ ಹಿಂದೆ ಶಿರಸಿಯಲ್ಲಿ ದನಗಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment