ಶಿವಮೊಗ್ಗ : ಅಪ್ರಾಪ್ತೆಯನ್ನು ಮದುವೆಯಾಗಿ ಆಕೆಯೊಂದಿಗೆ ಎರಡು ತಿಂಗಳು ಸಂಸಾರ ಸಡೆಸಿದ್ದ ನಗರದ ಹಣ್ಣಿನ ವ್ಯಾಪಾರಿಯನ್ನು ಪೋಕ್ಸೊಕಾಯ್ದೆ, ಅತ್ಯಾಚಾರ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದು, ಅಪ್ರಾಪ್ತೆಯ ರಕ್ಷಣೆ ಮಾಡಲಾಗಿದೆ.
ಶರವತಿ ನಗರದ 25 ವರ್ಷದ ಹಣ್ಣಿನ ವ್ಯಾಪಾರಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಅಪ್ರಾಪ್ತೆಯನ್ನು ಮದುವೆಯಾಗಿದ್ದ. 2 ವರ್ಷದಹಿಂದೆ ಬಾಲಕಿ ತಾಯಿ ಅನಾರೋಗ್ಯದ ನಿಮಿತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆರೈಕೆಗಾಗಿ ತಾಯಿ ಜತೆ ಬಂದಿದ್ದ ಅಪ್ರಾಪ್ತೆ ಹಣ್ಣು ತುವಾಗ ಆಸ್ಪತ್ರೆ ಸಮೀಪದ ವ್ಯಾಪಾರಿ ಪರಿಚುವಾಗಿತು. ತಾಯಿ ಚೇತರಿಸಿಕೊಂಡ ಬಳಿಕ ಮನೆಗೆ ಮೆಳಿದ್ದಳು ಆದರೆ ಸ್ವಲ್ಪ ದಿನದಲ್ಲಿ ತಾಯಿ ಕೊನೆಯುಸಿರೆಳೆದಿದ್ದರು.
ಈ ವೇಳೆ ಸಂಬAಧಿಗಳು ಆಕೆಯ ಮದುವೆ ಬಗ್ಗೆ ಪ್ರಸ್ತಾಪಿಸಿದ್ದರು. ಇದರಿಂದ ಆತಕಗೊಂಡ ಬಾಲಕಿ ಪರಿಚಿತನಾಗಿದ್ದ ಹಣ್ಣಿನ ವ್ಯಾಪಾರಿ ಬಳಿ ಅಳಲು ತೋಡಿಕೊಂಡು ರಕ್ಷಣೆಗೆ ಮೊರೆ ಇಟ್ಟಿದ್ದಳು. ಆತನ ಸಲಹೆಯಂತೆ ನಗರಕ್ಕೆ ಬಂದಿದ್ದ ಆಕೆಯನ್ನು ವ್ಯಾಪಾರಿ ಶರಾವತಿ ನಗರದ ತನ್ನ ಮನೆಗೆ ಕರೆದೊಯ್ದ ಮದುವೆಯಾಗಿದ್ದ ಈ ಬಗ್ಗೆ ವಾರದ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು.
ಪೊಲೀಸರೊಂದಿಗೆ ವ್ಯಾಪಾರಿ ಮನೆ ಮೇಲೆ ದಾಳಿ ಮಾಡಿ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ.
ಎಸ್ಬಿ ಬಿ.ಎಂ. ಲಕ್ಷಿö್ಮÃಪ್ರಸಾದ್ ಸೂಚನೆ ಮೇರೆಗೆ ವ್ಯಾಪಾರಿ ವಿರುದ್ಧ ದುಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment