ಮೊಬೈಲ್ ಚಾರ್ಜಿಂಗ್ ವಿಷಯದಲ್ಲಿ ಮದ್ಯಪ್ರದೇಶ ಮೂಲದ ಕೊಲಿ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳವೊಂದು ಹತ್ಯೆಯಲ್ಲಿ ಅಂತ್ಯ ಕಂಡಿರುವ ದುರಂತಕರ ಘಟನೆ ರಾಜಾಜಿನಗರ ಪೊಲ್ಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅನಿಲ್ ಮೃತ ದುರ್ದೈವಿ. ಅನಿಲ್ನನ್ನು ಹತ್ಯೆಗೈದ ಅರೊಪದ ಮೇಲೆ ಅಕಾಶ್ ಎಂಬ ಯುವಕನನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕಾಶ್ ನಗರದಲ್ಲಿ ಬಾಡಿಗೆ ಮನೆಯೊದರಲ್ಲಿ ವಾಸವಾಗಿದ್ದ ಅನಿಲ್ ಮತ್ತು ಆಕಾಶ್ ಎಂದಿನAತೆ ಮಧ್ಯೆಸೇವನೆಯಲ್ಲಿ ತೊಡಗಿದ್ದರು. ಈ ವೇಳೆ ಕೋಣೆಯಲ್ಲಿದ್ದ ಏಕೈಕ ಚಾರ್ಜಿಂಗ್ ಪಾಯಿಂಟ್ಗೆ ಯಾರ ಮೊಬೈಲ್ ಚಾರ್ಜಿಂಗ್ಗೆ ಹಾಕಬೇಕೆಂಬ ವಿಷಯದ ಬಗ್ಗೆ ಇಬ್ಬರಲ್ಲೂ ವಾಗ್ವಾದ ಶುರುವಾಗಿದ್ದು. ಮಧ್ಯದ ಸಶೆಯಲ್ಲಿ ಇಬ್ಬರೂ ಇದ್ದ ಕಾರಣ ಹೊಡೆದಾಟಕ್ಕೂ ತಿರುಗಿದೆ. ಅನಿಲ್ ತನಗೆ ಕೆನ್ನೆಗೆ ಬಾರಿಸಿದ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಆಕಾಶ್ ಮರದ ತುಂಡಿನಲ್ಲಿ ಅನಿಲ್ ಅನಿಲ್ ತಲೆಗೆ ಹೊಡೆದಿದ್ದ.
ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
Leave a Comment