ಭಟ್ಕಳ : ಮುರ್ಡೇಶ್ವರದ ಅರಬೀ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುವ ವೇಳೆ ಗಿಲ್ನಟ್ ದೋಣಿ ಸಮುದ್ರ ಅಲೆಯ ರಭಸಕ್ಕೆ ಮಗುಚಿದ ಕಾರಣ 7 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರದ ಘಟನೆ ನಡೆದಿದೆ.
ಜನಾರ್ದನ ಹರಿಕಾಂತ ಇವರಿಗೆ ಸೇರಿದ ಜಲ ಗಂಗಾ ದೋಣಿ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆಅಲೆಯ ರಭಸಕ್ಕೆ ದೋಣಿ ಮಗುಚಿದ ಕಾರಣ ದೋಣಿಯಲ್ಲಿದ್ದ 7 ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮೀನುಗಾರರು ಮಗುಚಿದ ದೋಣಿಯ ಮೇಲೆ ಕೂತ ಸಹಾಯ ಯಾಚಿಸುತ್ತಿರುದನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ತಕ್ಷಣ ಇನೊಂದು ಬೋಟ್ ಮೂಲಕ 7 ಮಂದಿಯನ್ನು ರಕ್ಷಣೆ ಮಾಡಿ ದಡಕ್ಕೆ ಕರೆತರಲಾಗಿದ್ದು.
ದೋಣಿ ಮಗುಚಿದ ಕಾರಣ ದೋಣಿಯ ಎಂಜಿನ್ ಹಾಗೂ ಮೀನುಗಾರಿಕೆ ಬಳಸುವ ಬಲೆ ಸೇರಿ ಸುಮಾರು 1,50,000 ರೂ ಹಾನಿಯಾಗಿರುವ ಬಗ್ಗೆ ಮುರುಡೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment