ಶಿರಸಿ : ಅತಿಯಾದ ಮಳೆಗೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿನ ಉತ್ತರ ಕನ್ನಡದ ಕಳಚೆ ಸೇರಿದಂತೆ ಇತರ ಪ್ರದೇಶದ ರೈತರ ನೆರವಿಗೆ ಅಮೇರಿಕಾ ಹವ್ಯಕ ಅಸೋಸಿಯೇಶನ್ ಸ್ವರ್ಣವಲ್ಲಿ ಸಂಸ್ಥಾನದ ಮೂಲಕ ನೆರವಿನ ಹಸ್ತ ಚಾಚಿದೆ.
ಈ ಕುರಿತು ಮಾಹಿತಿ ನೀಡಿರುವ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್ಟ ಸೋಂದಾ ಸ್ವರ್ಣದಲ್ಲಿ ಮಹಾ ಸಂಸ್ಥಾನದ ಕಠಾಧೀಶ ಶ್ರಿಗಂಗಾಧರೆAದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಮ್ಮಿಕೊಂಡ ನೆರವಿನ ಕಾರ್ಯಕ್ಕೆ ಅಮೇರಿಕಾ ಹವ್ಯಕ ಅಸೋಸಿಯೇಶನ್. ಭೈರುಂಬೆ ಶಾಎದಾಂಬಾ ಶಿಕ್ಷಣ
ಗ್ರಾಮೀಣಾಭಿವೃಧ್ಧಿ ಸಂಸ್ಥೆ ಹೆರಿನಲ್ಲಿ ಇರುವ ನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯ ಏಳೂವರೆ ಸಾವಿರ ಡಾಲರ್ (5.55 ಲಕ್ಷ) ನೆರವು ನೀಡಿದೆ. ಅಮೆರಿಕಾ ಹವ್ಯಕ ಸದಸ್ಯರ ಸಂಗ್ರಹಿಸಿ ನೀಡಿದ ದೇಣೆಗೆ ಇದಾಗಿದೆ ಎಂದಿದ್ದಾರೆ.
ಈಚೆಗಿನ ಅತಿವವೃಷ್ಟಿಯಿಂದ ಉಂಟಾದ ಹಾನಿ ನೋಡಿದರೆ ಮನ ಕಲಕುವಂತೆ ಇದೆ. ಹಾನಿಯ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದಾಗ ನೋವುಂಟಾಗುತ್ತಿದೆ. ಹಾನಿಗೆ ಒಳಗಾದ ಕುಟುಂಬಗಳಿಗೆ ಶ್ರೀಮಠ ನೆರವಾಗಲು ಮುಂದಾಗಿರುವದು ನಿಜಕ್ಕೂ ಶ್ಲಾಘನೀಯ. ಈ ದೇಣಿಗೆಯನ್ನ ಪ್ರವಾಹದ ಸಂಕಷ್ಟದ ನಿವಾರಣೆಗೆ ಬಳಸಿಕೊಳ್ಳಬಹುದು ಎಂದು ಅಮೆರಿಕಾ ಹವ್ಯಕ ಅಸೋಸಿಯೇಶನ್ ಪ್ರಕಟನೆಯಲ್ಲಿ ತಿಳಿಸಿದೆ.
Leave a Comment